ಉಡುಪಿ: ಸ್ಕಾಟ್ಲ್ಯಾಂಡ್ನ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ ಗ್ಲ್ಯಾಸ್ಗೋ 2026 ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತೀಯ ತಂಡದ ಫಿಸಿಯೋ ಮತ್ತು ರಿಕವರಿ ಥೆರಪಿಸ್ಟ್ ಆಗಿ ಉಡುಪಿ ಮೂಲದ ರೋಹನ್ ಆರ್. ಬಾರಿತ್ತಾಯ ನಿಯೋಜನೆಗೊಂಡಿದ್ದಾರೆ.
ಜುಲೈ 23 ರಿಂದ ಆಗಸ್ಟ್ 2 ರವರೆಗೆ ನಡೆಯಲಿರುವ ಜಾಗತಿಕ ಕ್ರೀಡಾಕೂಟದಲ್ಲಿ ವಿಶ್ವದ ಪ್ರಮುಖ ಕಾಮನ್ವೆಲ್ತ್ ದೇಶಗಳ ಸಾವಿರಾರು ಕ್ರೀಡಾಪಟುಗಳು ಸ್ಪರ್ಧಿಸುತ್ತಿದ್ದಾರೆ. ದೇಶದ ಕ್ರೀಡಾಪಟುಗಳ ಫಿಟ್ನೆಸ್ ಹಾಗೂ ಕ್ರೀಡಾ ಶ್ರೇಷ್ಠತೆಯನ್ನು ಕಾಯ್ದುಕೊಳ್ಳುವ ಜವಾಬ್ದಾರಿ ರೋಹನ್ ಅವರ ಮೇಲಿದೆ. ಶ್ರಮಕ್ಕೆ ಸಿಕ್ಕ ಅಂತಾರಾಷ್ಟ್ರೀಯ ಗೌರವ ರೋಹನ್ ಅವರು ಯುಕೆ ಪ್ರತಿಷ್ಠಿತ ಲಾಫ್ಬರೋ ಯೂನಿವರ್ಸಿಟಿಯಿಂದ ಎಂಎಸ್ಸಿ ಉನ್ನತ ವ್ಯಾಸಂಗ ಪೂರೈಸಿದ್ದಾರೆ.
ಉಡುಪಿ ಸೇರಿದಂತೆ ರಾಜ್ಯದ ವಿವಿಧೆಡೆ ಐಕ್ಯಂ ಸ್ಪೋರ್ಟ್ಸ್ ಸೈನ್ಸ್ ಸಂಸ್ಥೆಯನ್ನು ಸ್ಥಾಪಿಸಿ, ಕ್ರೀಡಾಪಟುಗಳು ಹಾಗೂ ಸಾರ್ವಜನಿಕರಿಗೆ ವೈಜ್ಞಾನಿಕ ಹಂತದ ಫಿಸಿಯೋ ಮತ್ತು ರಿಕವರಿ ಥೆರಪಿ ಸೇವೆಗಳನ್ನು ನೀಡುತ್ತಿದ್ದಾರೆ. ಅವರ ವೃತ್ತಿಪರ ಅನುಭವ ಪರಿಗಣಿಸಿ ಇಂಡಿಯನ್ ಪ್ಯಾರಾ ಒಲಂಪಿಕ್ ತಂಡದ ಚೀಫ್ ಕೋಚ್ ಸತ್ಯನಾರಾಯಣ್ ಅವರು ಭಾರತ ತಂಡದ ಜೊತೆ ಸೇವೆ ಸಲ್ಲಿಸುವ ಈ ಮಹತ್ವದ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ.

