ಕಾರ್ಕಳ ಭುವನೇಂದ್ರ ಪ್ರೌಢ ಶಾಲೆಯಲ್ಲಿ ನಶಾ ಮುಕ್ತ ಭಾರತ ಜಾಗೃತಿ ಅಭಿಯಾನ ಮತ್ತು ಮೊಬೈಲ್ ದುಷ್ಪರಿಣಾಮಗಳ ಬಗ್ಗೆ ಮಾಹಿತಿ

0
5

ಕಾರ್ಕಳ ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆಯಲ್ಲಿ ನಶಾ ಮುಕ್ತ ಭಾರತ ಅಭಿಯಾನ ಮತ್ತು ಮೊಬೈಲ್ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯ ಶಿಕ್ಷಕ ಆರ್ ನಾರಾಯಣ ಶೆಣೈ ಯವರು ವಹಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷರ ಕಚೇರಿ ಹೆಡ್ ಕಾನ್ಸ್ಟೇಬಲ್ ಸಂತೋಷ್ ರವರು ವಹಿಸಿ ಮಾತನಾಡುತ್ತಾ ಇಂದಿನ ವಿದ್ಯಾರ್ಥಿಗಳು ದೇಶದ ಪ್ರಗತಿಯನ್ನು ಗಮನಿಸುತ್ತಾ ತಮ್ಮ ವಿಶೇಷ ಜ್ಞಾನದ ಮೂಲಕ ಹೊಸ ಹೊಸ ಆವಿಷ್ಕಾರಗಳ ಕಡೆ ಗಮನ ಹರಿಸಬೇಕು. ತಮ್ಮ ಬೌದ್ಧಿಕ ಮಾನಸಿಕ ನೈತಿಕ ಸಾಮರ್ಥ್ಯಗಳಿಗೆ ಧಕ್ಕೆ ಉಂಟು ಮಾಡುವ ಮಾದಕ ವ್ಯಸನಗಳಿಗೆ ತುತ್ತಾಗಬಾರದು. ತಮ ಉಜ್ವಲ ಭವಿಷ್ಯದಲ್ಲಿ ಉತ್ತಮ ಸೇವೆಯನ್ನು ದೇಶಕ್ಕೆ ನೀಡಬೇಕಾಗಿದೆ. ಹಾಗೆಯೇ ಅತಿಯಾದ ಮೊಬೈಲ್ ಬಳಕೆ ಆರೋಗ್ಯದ ಮೇಲೂ ಭಾರೀ ಕೆಟ್ಟ ಪರಿಣಾಮ ಬೀರುತ್ತಿದೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ಪ್ರಚೋದನಕಾರಿ ಕಾನೂನು ಬಾಹಿರ ವಿಷಯಗಳ ಸಂದೇಶ ರವಾಸಿದರೆ ಕಾನೂನು ಚೌಕಟ್ಟಿನೊಳಗೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಹಾಗೆಯೇ ವಿದ್ಯಾರ್ಥಿಗಳು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವುದು. ಮಾದಕ ದ್ರವ್ಯ ಸೇವನೆಗಳ ಚಟುವಟಿಕೆ ಕಂಡು ಬಂದರೆ ಕೂಡಲೇ ತಿಳಿಸಬೇಕು.

ನಿರ್ಜನ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳು ಒಬ್ಬಂಟಿಗರಾಗಿ ಓಡಾಡಬಾರದು. ಯಾವುದೇ ತೊಂದರೆಗಳು ಆದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿ ಇಲಾಖೆ ನಿಮ್ಮ ರಕ್ಷಣೆಗೆ ಸಿದ್ಧವಿದೆ. ಎಂದರು. ಪೊಲೀಸ್ ಠಾಣೆ ಅದು ಓಪನ್ ಹೌಸ್ ದಿನದ ಇಪ್ಪತ್ತನಾಲ್ಕು ಗಂಟೆಯೂ ತೆರೆದಿರುತ್ತದೆ. ನಿರ್ಭಯವಾಗಿ ಬಂದು ದೂರುಗಳನ್ನು ದಾಖಲಿಸಬಹುದು ಎಂದರು.

ಇನ್ನೋರ್ವ ಅತಿಥಿ ಸಮಾಜ ಸೇವಕಿ ತಿಲೋತ್ತಮರವರು ಮಾತಾಡಿ ಮುಖ್ಯವಾಗಿ ಇಂದು ಅಲ್ಲಲ್ಲಿ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ ಗಳ ವರದಿಯಾಗುತ್ತಲೇ ಇದೆ. ಹೆಣ್ಣು ಮಕ್ಕಳು ಈ ಬಗ್ಗೆ ಎಚ್ಚರದಿಂದಿರಬೇಕು ಗುಡ್ ಟಚ್ ಬ್ಯಾಡ್ ಟಚ್ ಬಗ್ಗೆ ಅರಿವು ಹೊಂದಿರಬೇಕು. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಹರಿಸಿ ಉನ್ನತ ಹುದ್ದೆಗಳಲ್ಲಿ ಜನರ ಸೇವೆ ಮಾಡುವಂತಾಗಬೇಕು ಎಂದು ಹೇಳಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ಶಿಕ್ಷಕ ಸಂಜಯ ಕುಮಾರ್ ನಿರ್ವಹಿಸಿದರು. ಕಾರ್ಯಕ್ರಮವು ಐಕ್ಯ ಮಂತ್ರದ ಮೂಲಕ ಮುಕ್ತಾಯಗೊಂಡಿತು.