ಪುತ್ತೂರು: ಅದೆಷ್ಟೋ ಅಶಕ್ತರಿಗೆ ಬೆಳಕಾಗಿ ನಿಂತು ಇದೀಗ ಅಲ್ಪಕಾಲದ ಅಸೌಖ್ಯದಿಂದ ನಮ್ಮನ್ನಗಲಿರುವ “ಕಲಾಸಿರಿ ಗೊಂಬೆ ಬಳಗ ” ಸಂಸ್ಥೆಯ ಸ್ಥಾಪಕರಾದ ಅಣ್ಣಪ್ಪ ಪುತ್ತೂರು ಅವರ ಶ್ರದ್ದಾಂಜಲಿ ಸಭೆಯು ಜು. ೦೪ರಂದು ಮಧ್ಯಾಹ್ನ ಗಂಟೆ 12ಕ್ಕೆ ಕೃಷ್ಣನಗರ ಮೆಲ್ಮಜಲು ಮನೆಯಲ್ಲಿ ನಡೆಯಲಿದೆ. ಜೀವನದ ಬಹುಪಾಲು ಸಮಾಜದ ಬಗ್ಗೆ ಯೋಚಿಸುತ್ತಾ ಅದೆಷ್ಟೋ ಸೇವಾ ಸಂಸ್ಥೆಗಳೊಂದಿಗೆ ಕೈ ಜೋಡಿಸಿ ಹಲವಾರು ಬಡ ಕುಟುಂಬಗಳಲ್ಲಿ ಅಸ್ವಸ್ಥ ಜೀವಗಳಿಗೆ ಅವಿರತ ಶ್ರಮವಹಿಸಿ ದಾನಿಗಳ ಮೂಲಕ ಸಂಗ್ರಹಿಸಿ ಸಹಾಯ ಹಸ್ತ ನೀಡಿ ಎಲ್ಲರ ಹೆಗ್ಗಳಿಕೆಗೆ ಪಾತ್ರರಾಗಿದ್ದರು.