ಮೂಡುಬಿದಿರೆ : ಸನಾತನ ಸಂಸ್ಥೆಯ ವತಿಯಿಂದ “ಸಾಮಾಜಿಕ ಉಪಕ್ರಮ” ದ ಅಂತರ್ಗತ ಮೂಡುಬಿದಿರೆಯ ಕೆಸರುಗದ್ದೆ ಊರಿನ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಯಲ್ಲಿ ಎಲ್ಲಾ ಮಕ್ಕಳಿಗೆ ಉಚಿತವಾಗಿ ತಿಂಡಿ ತಿನಸುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಕಾರ್ಯಕರ್ತರಾದ ಸೌ. ಶ್ಯಾಮಲಾ ಸುರೇಶ್, ಸೌ. ನಂದಿತಾ ಕಾಮತ್, ಚಿದಾನಂದ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಕಾಶ ಶೆಟ್ಟಿಗಾರ್ ಇವರು ಉಪಸ್ಥಿತರಿದ್ದರು.

