ಪುತ್ತೂರು: ತುಳುಕೂಟ ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಆಶ್ರಯದಲ್ಲಿ ತುಳು ಕಬಿಕೂಟೊ – 2025 ಕಾರ್ಯಕ್ರಮ ಸೆ. 5ರಂದು ಬೆಳಿಗ್ಗೆ 9-30ರಿಂದ ಪುತ್ತೂರಿನ ಜಿ.ಎಲ್ ವನ್ ಮಹಲ್ನ ಮೊದಲ ಮಹಡಿಯಲ್ಲಿ ನಡೆಯಲಿದೆ.
ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನ ಮಾಲಕ ಸಿರಿ ಬಲರಾಮ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ತುಳು-ಕನ್ನಡ ಸಾಹಿತಿ ಕವಿತಾ ಅಡೂರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ತುಳು-ಕನ್ನಡ ಸಾಹಿತಿ ಅಕ್ಷತಾ ಪೆರ್ಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.