ಮುಂಬರಲಿರುವ ಜಾತಿ ಸಮೀಕ್ಷೆಯಲ್ಲಿ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಕಾಲಂಗಾಗಿ ಒತ್ತಾಯಿಸಿ ದಾವಣಗೆರೆ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಮತ್ತು ಬಸವಪರ ಸಂಘಟನೆಗಳು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಎಸ್ .ಬಿ ರುದ್ರಗೌಡ, ಬಿ ಎಂ ವಿಶ್ವೇಶ್ವರಯ್ಯ, ಟಿ ಎಂ. ಶಿವಮೂರ್ತಯ್ಯ, ಕೆ ಸಿ ನಾಗರಾಜ್, ಎಂ ನಾಗರಾಜ್, ಭರಮಪ್ಪ ಮೈಸೂರು, ಸಿದ್ದೇಶಣ್ಣ, ಜಾಗತಿಕ ಲಿಂಗಾಯತ ಮಹಾ ಸಭಾದ ಕುಸುಮಾ ಲೋಕೇಶ್, ಪೂರ್ಣಿಮಾ, ಸುವರ್ಣಮ್ಮ, ಶಿವಬಸಮ್ಮ, ಮಂಜುನಾಥ್, ಕರೂರು ಹನುಮಂತಪ್ಪ ಮಲ್ಲಿಕಾರ್ಜುನಪ್ಪ ಮೊದಲಾದವರು ಉಪಸ್ಥಿತರಿದ್ದರು.

