ಬೆಳ್ಳಾರೆ : ಲಕ್ಷ್ಮಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ.) ಗ್ರಾಮ ಪಂಚಾಯತ್ ಬೆಳ್ಳಾರೆ ಇದರ ವಾರ್ಷಿಕ ಮಹಾಸಭೆ ಸೆ. ೨೦ರಂದು ರಾಜೀವಗಾಂಧಿ ಸೇವಾ ಕೇಂದ್ರ ಬೆಳ್ಳಾರೆ ಇಲ್ಲಿ ನಡೆಯಿತು,.
ಕಾರ್ಯಕ್ರಮದ ಉದ್ಘಾಟನೆ ನಮಿತಾ.ಎಲ್ ರೈ ಅಧ್ಯಕ್ಷರು. ಗ್ರಾ. ಪಂ. ಬೆಳ್ಳಾರೆ ಅವರು ನೆರವೇರಿಸಿದರು. ಮಹೇಶ ವಲಯ ಮೇಲ್ವಿಚಾರಕರು ತಾಲ್ಲೂಕು ಪಂಚಾಯತ್ ಸುಳ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಯಲಕ್ಷ್ಮೀ BRP PRI ತಾ.ಪಂ. ಸುಳ್ಯ, ರಿತಿಕ್ Form ಮ್ಯಾನೇಜರ್, ಮಣಿಕಂಠ ಸದಸ್ಯರು ಗ್ರಾಮ ಪಂಚಾಯತ್ ಬೆಳ್ಳಾರೆ, ಶಶಿಕಲಾ ಚಾವಡಿ ಬಾಗಿಲು ಲಕ್ಷ್ಮಿ ಸಂಜೀವಿನಿ ಒಕ್ಕೂಟದ ಉಪಾಧ್ಯಕ್ಷರು, ಮಮತಾ ಕಾರ್ಯದರ್ಶಿ ಲಕ್ಷ್ಮಿ ಸಂಜೀವಿನಿ ಒಕ್ಕೂಟ ಬೆಳ್ಳಾರೆ, ರೇಷ್ಮಾ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷರು, ವೀಣಾ ಮುಡಾಯಿತೋಟ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಬೆಳ್ಳಾರೆ, ಜಯಶ್ರೀ ಸದಸ್ಯರು ಗ್ರಾಮ ಪಂಚಾಯತ್ ಬೆಳ್ಳಾರೆ ಉಪಸ್ಥಿತರಿದ್ದರು.
MBK ಗೀತಾ ಲೆಕ್ಕ ಪತ್ರ ಮಂಡಿಸಿದ್ದರು. ಇಂದಿರಾ ಅಂಗನವಾಡಿ ಕಾರ್ಯಕರ್ತೆ ಪ್ರಾರ್ಥಿಸಿದರು. ತಾರಾ ಕೃಷಿ ಸಖಿ ಸ್ವಾಗತಿಸಿದರು. MBK ಗೀತಾ ಪ್ರೇಮ್ ವಂದಿಸಿದರು. LCRP ದಿವ್ಯಾ ವಂದಿಸಿದರು.
ಲಾಭಾಂಶದ ಚೆಕ್ ವಿತರಣೆ
ವಿಶೇಷ ಚೇತನ ಸಂಘಕ್ಕೆ ಸ್ವ-ಉದ್ಯೋಗಕ್ಕೆ ಚೆಕ್ ವಿತರಣೆ ಹಾಗೂ ಮಾದಕ ವ್ಯಾಪನ ಮುಕ್ತ ಅಭಿಯಾನ ಪೋಸ್ಟರ್ ಬಿಡುಗಡೆ ಮಾಡಲಾಯಿತು. ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಅಧ್ಯಕ್ಷರು ಮಮತಾ ಪಡ್ಪು, ಉಪಾಧ್ಯಕ್ಷರು ಲಲಿತಾ ಪಡ್ಪು, ಕಾರ್ಯದರ್ಶಿ ಅನಿಸಾ, ಖಜಾಂಚಿ ಮಿಶ್ರಿಯಾ, ಜೊತೆ ಕಾರ್ಯದರ್ಶಿಯಾಗಿ ಶೋಭನಾ ಪನ್ನೆ ಅವರನ್ನು ಆಯ್ಕೆ ಮಾಡಲಾಯಿತು.

