ಜನಮೆಚ್ಚಿದ ಸಾಹಿತಿ, ಶಿಕ್ಷಕ, ನೂರಾರು ಕೃತಿ, ನೂರಾರು ಸಂಘಟನೆ, ನೂರಾರು ಪ್ರಶಸ್ತಿ, ಪುರಸ್ಕಾರಗಳ ಸರದಾರ ಡಾ. ಸಂ. ವೆಂ. ತಮ್ಮನಗೌಡ ಗದಗ ಇವರೀಗೆ ಕನ್ನಡ ಭವನದ ಶ್ರೇಷ್ಠ ಪ್ರಶಸ್ತಿ ಇದೇ ಬರುವ 18-01-2026 ಭಾನುವಾರ ಕಾಸರಗೋಡು ಕನ್ನಡ ಭವನ “ರಜತ ಸಂಭ್ರಮ “ಅದ್ದೂರಿ ಕಾರ್ಯಕ್ರಮವಾದ “ನಾಡು -ನುಡಿ ಸಂಭ್ರಮ ” ಕನ್ನಡ ಭವನ ಸಂಕೀರ್ಣದ “ಶ್ರೀ ಕೃಷ್ಣ ದೇವರಾಯ “ವೇದಿಕೆಯಲ್ಲಿ ಡಾ. ಸಂಗನಗೌಡ ವೆಂಕನಗೌಡ ತಮ್ಮನಗೌಡ್ರ ಗದಗ ರೀಗೆ “ರಾಷ್ಟ್ರ ಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ 2026.ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

