ಹಿಂದೂ ಸಂಗಮ ಆಯೋಜನಾ ಸಮಿತಿ ವಿಟ್ಲ ತಾಲೂಕು ಪೆರ್ನೆ ಮಂಡಲದ ವತಿಯಿಂದ ಕಡೇಶಿವಾಲಯ ಪೆರ್ನೆ ಬಿಳಿಯೂರು ಕೆದಿಲ ಗ್ರಾಮಗಳನ್ನೊಳಗೊಂಡು ಯುವ ಸಮುದಾಯದ ರಾಷ್ಟ್ರ ಶಕ್ತಿ ಉದ್ದೀಪನಕ್ಕಾಗಿ ನಮ್ಮೂರ ನಮ್ಮ ಮನೆಯ ಕಾರ್ಯಕ್ರಮ ಹಿಂದೂ ಸಂಗಮ 01.02.2026ರಂದು ಪೆರ್ನೆ ಕಡಂಬು ಜಂಕ್ಷನ್ ಹನುಮನ್ ದ್ವಾರದ ಬಳಿಯ ಮೈದಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಹೆಮ್ಮೆಯ ಸಾಧಕರು ಗೌರವ ಸಮರ್ಪಿಸುವ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಯುವ ಕವಿ ಸಾಹಿತಿ ಸತೀಶ್ ಬಿಳಿಯೂರು ಇವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

