ಅಶಕ್ತ ಹಿಂದೂ ಬಾಂಧವ್ಯ ಸೇವಾ ನಿಧಿ ಮಹಿಳಾ ಸಂಘ ಮೂಡುಬಿದಿರೆ ದ.ಕ. ವತಿಯಿಂದ ನಡೆಸಲಾದ, ಭಾರತ್ ಮಾತಾ ಪೂಜನ ಕಾರ್ಯಕ್ರಮ ಹಾಗೂ ಹಿಂದೂ ಮನೆ ಮನೆಗೆ ಡಬ್ಬಿ ವಿತರಣಾ ಕಾರ್ಯಕ್ರಮವು ಶ್ರೀ ಗೋಪಾಲ ಕೃಷ್ಣ ದೇವಸ್ಥಾನ ಕಲ್ಸಂಕ ಎಂಬಲ್ಲಿ ಫೆ.6 , ಸಂಜೆ 4-30ಕ್ಕೆ ನಡೆಯಿತು.

ಅಶಕ್ತರಿಗೆ ಆರೋಗ್ಯ ಸಮಸ್ಯೆ ಇದ್ದಲ್ಲಿ ಸಹಾಯ ಮಾಡುವುದು,ಮನೆ ಕಟ್ಟಲು ಸಹಾಯ,ಅಶಕ್ತ ಹಿಂದೂ ಹೆಣ್ಣು ಮಕ್ಕಳಿಗೆ ವಿವಾಹಕ್ಕೆ ಧನಸಹಾಯ,ಓದುವ ವಿದ್ಯಾರ್ಥಿಗಳಿಗೆ ಸಹಾಯ ನಿಧಿ,ಅಶಕ್ತ ಹಿಂದೂ ಬಾಂಧವರಿಗೆ ಸಹಾಯ ನೀಡುವುದು ಇದರ ಉದ್ದೇಶವಾಗಿತ್ತು.

