ಗೆಜ್ಜೆಗಿರಿ ಕ್ಷೇತ್ರದಲ್ಲಿ ವಿಜಯ ಕುಮಾರ್ ಜೈನ್ ಅವರಿಗೆ ‘ಶಾಲೂ ಪ್ರಸಾದ’ ನೀಡಿ ಗೌರವಾರ್ಪಣೆ

0
13

ವರದಿ : ಮಂದಾರ ರಾಜೇಶ್ ಭಟ್

ಗೆಜ್ಜೆಗಿರಿ : ಪರಮಪಾವನ ಪುಣ್ಯಕ್ಷೇತ್ರವಾದ ಗೆಜ್ಜೆಗಿರಿ ಆದಿ ಧೂಮಾವತಿ ಶ್ರೀ ದೇಯಿಬೈದೆತಿ ಕ್ಷೇತ್ರದಲ್ಲಿ, ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಅಳದಂಗಡಿ ಅವರಿಗೆ ಕ್ಷೇತ್ರದ ವತಿಯಿಂದ ಭಕ್ತಿಪೂರ್ವಕವಾಗಿ ‘ಶಾಲೂ ಪ್ರಸಾದ’ ನೀಡಿ ಗೌರವಿಸಲಾಯಿತು.

ಕ್ಷೇತ್ರದ ಶ್ರೇಯೋಭಿವೃದ್ಧಿಗಾಗಿ ಅವರು ನೀಡುತ್ತಿರುವ ನಿರಂತರ ಸೇವೆಯನ್ನು ಗುರುತಿಸಿ, ದೈವದ ಅನುಗ್ರಹದ ರೂಪದಲ್ಲಿ ಈ ಮರ್ಯಾದೆಯನ್ನು ಸಲ್ಲಿಸಲಾಯಿತು.

​ಗಣ್ಯರ ಉಪಸ್ಥಿತಿ

ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಸಮಿತಿಯ ಪ್ರಮುಖರು ಉಪಸ್ಥಿತರಿದ್ದು ಹಾರೈಸಿದರು.

ಪೀತಾಂಬರ ಹೇರಾಜೆ (ಗೌರವಾಧ್ಯಕ್ಷರು, ಕ್ಷೇತ್ರ ಆಡಳಿತ ಸಮಿತಿ), ನಾರಾಯಣ ಮಚ್ಚಿನ (ಆಡಳಿತ ಸಮಿತಿ ಸದಸ್ಯರು), ನಿತ್ಯಾನಂದ ಎನ್. ನಾವರ (ಸಂಚಾಲಕರು, ಗೆಜ್ಜೆಗಿರಿ ಯಕ್ಷಗಾನ ಮೇಳ ಹಾಗೂ ಆಡಳಿತ ಸದಸ್ಯರು), ದೈವದ ಸನ್ನಿಧಿಯಲ್ಲಿ ನಡೆದ ಈ ಸರಳ ಹಾಗೂ ಅರ್ಥಪೂರ್ಣ ಸಮಾರಂಭದಲ್ಲಿ ಕ್ಷೇತ್ರದ ಪದಾಧಿಕಾರಿಗಳು ಮತ್ತು ಭಕ್ತಾದಿಗಳು ಪಾಲ್ಗೊಂಡು ವಿಜಯ ಕುಮಾರ್ ಜೈನ್ ಅವರ ಸೇವಾ ಕಾರ್ಯವನ್ನು ಶ್ಲಾಘಿಸಿದರು.

LEAVE A REPLY

Please enter your comment!
Please enter your name here