ಪಡುಬಿದ್ರಿ ” ಪಡುಬಿದ್ರಿಯ ಪ್ರತಿಷ್ಠಿತ ಓಂಕಾರ್ ಕಲಾ ಸಂಗಮದಲ್ಲಿ ನಡೆಯುತಿರುವ ” ರಜಾ-ಮಜಾ ಶಿಬಿರದಲ್ಲಿ ” ವಿಶ್ವರತ್ನ ಡಾ! ಬಿ.ಅರ್ ಅಂಬೇಡ್ಕರ್ ರವರ 134 ನೇ ಜನ್ಮ ದಿನಾಚರಣೆಯನ್ನು ಅಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜಿಕ ಚಿಂತಕರಾದ ಶೇಖರ್ ಹೆಜ್ಮಾಡಿ ಯವರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾ ಅರ್ಪಣೆ ಮಾಡಿ ಅಂಬೇಡ್ಕರ್ ಚಿಂತನೆಗಳು ಮತ್ತು ಭಾರತದ ಸಂವಿಧಾನ ಬಗ್ಗೆ ರಜಾ- ಮಜಾ ಶಿಬಿರದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಲಾ ಸಂಗಮದ ಮುಖ್ಯಸ್ಥರಾದ ಗೀತಾ ಅರುಣ್ ದೀಪ ಪ್ರಜ್ವಲಣೆ ಮಾಡಿದರು.
ಶಿಬಿರಾರ್ಥಿ ಪುಟಾಣಿ ಜೃೆಷ್ಣವಿ ರವರ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಉದಯ ಕುಮಾರ್ ಭಟ್ , ಅರುಣ್ ಕುಮಾರ್ , ಸುಪ್ರೀತಾ ಕೋಟ್ಯಾನ್ ಪಾಂಗಳ , ಶ್ವೇತಾ ಪಾಂಗಳ ಉಪಸ್ಥಿತರಿದ್ದರು.
ಸಂತೋಷ್ ಪಡುಬಿದ್ರಿ ಸ್ವಾಗತಿಸಿ.ದೀಪಾ ಕರ್ಕೇರ ವಂದಿಸಿದರು.
ಪಡುಬಿದ್ರಿ ಓಂಕಾರ್ ಕಲಾ ಸಂಗಮದಲ್ಲಿ ಅಂಬೇಡ್ಕರ್ ಜಯಂತಿ ಅಚರಣೆ
RELATED ARTICLES