ಉಡುಪಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಮಹಾಪರಿನಿರ್ವಾಣ ದಿನದಂದು ಗೌರವ ನಮನಕ್ಕೆ ಸಾಮರಸ್ಯ ದಿವಸ ಪ್ರಯುಕ್ತ ಸಂವಿಧಾನ ರಚನೆಗೆ ಅಂಬೇಡ್ಕರ್ ನೀಡಿದ ಕೊಡುಗೆಯ ವಿಷಯದ ಬಗ್ಗೆ ವಿದ್ಯಾರ್ಥಿಗಳಿಂದ ಪ್ರಬಂಧ ಸ್ಪರ್ಧೆ ಉಡುಪಿಯ ಸಾಧ್ವಿ ಮಾಧ್ವಿ ಪಾಠಶಾಲೆಯಲ್ಲಿ ನಡೆಯಿತು. ನಗರದ ಹಲವು ಕಾಲೇಜಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದರು.

ಈ ಸಂಧರ್ಭದಲ್ಲಿ ಡಾ. ಶಿವಾನಂದ ನಾಯಕ್,ಉಡುಪಿ ಜಿಲ್ಲಾ ಪ್ರಮುಖರಾದ ರಾಜಶಂಕರ್, ನಗರ ಸಂಘಟನಾ ಕಾರ್ಯದರ್ಶಿ ರೋಹಿತ್,ನಗರ ಕಾರ್ಯದರ್ಶಿ ಮನೀಶ್ ಉಪಸ್ಥಿತರಿದ್ದರು ಹಾಗೂ ಶುಕ್ರವಾರ ಡಾ.ಜಿ. ಶಂಕರ್ ವಿದ್ಯಾರ್ಥಿನಿ ಪದವಿ ಕಾಲೇಜಿನಲ್ಲಿ ನಡೆದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವಿಜೇತರು ಕುಮಾರಿ ಅನನ್ಯ, ದ್ವಿತೀಯ ಸ್ಥಾನ ಕುಮಾರಿ ದೀಪ್ತಿ . ವಿಜೇತರ ಪ್ರಶಸ್ತಿಯನ್ನು ಡಾ. ಶಿವಾನಂದ ನಾಯಕ್ ವಿತರಿಸಿರುತ್ತಾರೆ.

