ಮಹಾನಗರ : ಭಾರತ ಸಂವಿಧಾನದ ೮ನೇಯ ಪರಿಛ್ಚೇದದಲ್ಲಿ ಸೇರಿಸಲು ಕೊಂಕಣಿ ಭಾಷೆಯು ಗೋವಾದ ರಾಜ್ಯಭಾಷೆ ಹಾಗೂ ಒಂದು ಸ್ವತಂತ್ರ ಭಾಷೆಯಾಗಿರುವುದೇ ಕಾರಣ. ಈ ಭಾಷೆಯ ಉನ್ನತೀಕರಣವು ಗೋವಾ, ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯದಲ್ಲಿ ಕೊಂಕಣಿಯ ಶಿಕ್ಷಣ ಹಾಗೂ ಸಾಹಿತ್ಯದ ಬೆಳವಣಿಗೆಯಲ್ಲೇ ಇರುವುದು ಕೇವಲ ಸಮಾರಂಭಗಳಲ್ಲ” ಎಂದು ಕಾರ್ಯಕ್ರಮದ ಮುಖ್ಯ ಅತಿಥಿ ಡಾ. ಟಿ.ಎಮ್.ಎ ಪೈ ಉತ್ಕಕೃಷ್ಟ ಕೊಂಕಣಿ ಪುಸ್ತಕ ಪುರಸ್ಕಾರ ವಿಜೇತ ಹಾಗೂ ಅಂಕಣಕಾರ ಗೋವಾದ ಅನಂತ ಅಗ್ನಿಯವರು ವಿಶ್ವ ಕೊಂಕಣಿ ಕೇಂದ್ರದಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಹೇಳಿದರು.
ಮೊದಲು ರಾಷ್ಟ್ರಧ್ವಜವನ್ನು ಅರಳಿಸಿ ಮಂಗಳೂರಿನ ಕೊಂಕಣಿ ವಾಚನ ಸತ್ರದ ಕಾರ್ಯಕರ್ತರು ‘ಗೋಡಿ ಗೋಡಿ ಹೋಡಿ ಭಾಸ ಕೊಂಕಣಿ..ಎಂಬ ಅಭಿಮಾನ ಗೀತೆಯನ್ನು ಹಾಡಿ ನಂತರ ಅಶೋಕ ನಾಯಕ ವಿರಚಿತ ‘ಕೊಂಕಣಿ ಅಂತರ್ಧ್ವನಿ’ ಎಂಬ ಲಘು ನಾಟಕವನ್ನು ಆಡಿದರು. ಸಂಸ್ಥೆಯ ಅಧ್ಯಕ್ಷರಾದ ಸಿ ಎ ನಂದಗೋಪಾಲ ಶೆಣೈಯವರು ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಕಸ್ತೂರಿ ಮೋಹನ್ ಪೈಯವರು ವಿಶ್ವ ಕೊಂಕಣಿ ಕೇಂದ್ರದ ಪ್ರೋತ್ಸಾಹದಿಂದ ಸುಮಾರು ೪೫೦೦ ವಿದ್ಯಾರ್ಥಿಗಳು ತೃತೀಯ ಭಾಷೆ ಕೊಂಕಣಿ ಕಲಿತಿದ್ದಾರೆ, ನೀವೂ ನಿಮ್ಮ ಶಾಲಾ ಆಡಳಿತ ಮಂಡಳಿ ಹಾಗೂ ಹೆತ್ತವರ ಮನ ಒಲಿಸಿ ನಿಮ್ಮ ಶಾಲೆಯಲ್ಲಿ ಕೊಂಕಣಿ ಕಲಿಸಲು ವಿನಂತಿಸಿ’ ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು. ನವ ದೆಹಲಿಯ ಸಾಹಿತ್ಯ ಅಕಾಡೆಮಿಯ ಕೊಂಕಣಿ ಸಲಹಾಕಾರರಾದ ಮೆಲ್ವಿನ್ ರೊಡ್ರಿಗಸ್ಸ ರವರು ‘ಏನೂ ಕಲಿತರು ಕೊಂಕಣಿ ಮಕ್ಕಳು ಮಾತೃಭಾಷೆಯನ್ನು ಮರೆಯಬಾರದು’ ಎಂದು ಸಂದೇಶ ನೀಡಿದರು.

ಕಾರ್ಕಳದ ಎಸ್.ವಿ.ಟಿ ಶಾಲೆಯ ಕೌಸಲ್ಯ ಎಂಬ ವಿದ್ಯಾರ್ಥಿನಿಗೆ ಎಸ್.ಎಸ್.ಎಲ್.ಸಿಯಲ್ಲಿ ಕೊಂಕಣಿ ಭಾಷೆಯಲ್ಲಿ100 ಅಂಕಗಳನ್ನು ಪಡೆದುದಕ್ಕಾಗಿ ರೂ.7000 ದ ಶಿಷ್ಯವೇತನವನ್ನು ಉಷಾ ಮೋಹನ ಪೈಯವರು ನೀಡಿ ಸನ್ಮಾನಿಸಿದರು. ವಿವಿಧ ಶಾಲೆಗಳಿಂದ ಬಂದ ನೂರು ವಿದ್ರಾಥಿಗಳ ತಂಡಗಳು ಕೊಂಕಣಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಕೆನರಾ ಹೈಸ್ಕೂಲ ಡೊಂಗರಕೇರಿ ರೂ.೫೦೦೦ದ ಮೊದಲ ಬಹುಮಾನ, ಶಾರದಾ ವಿದ್ಯಾಲಯ ಕೊಡಿಯಾಲಬೈಲಗೆ ರೂ.೩೦೦೦ದ ದ್ವಿತೀಯ ಹಾಗೂ ಕೆನರಾ ಹೈಯರ್ ಪ್ರೈಮರಿ, ಊರ್ವ ರೂ.2000ದ ತೃತೀಯ ಬಹುಮಾನ ಪ್ರಾಪ್ತವಾಯಿತು. ಎಮ್.ಆರ್. ಕಾಮತರವರು ಸೂತ್ರ ಸಂಚಾಲಕರಾಗಿದ್ದರು. ಉಪಾಧ್ಯಕ್ಷರುಗಳಾದ ವಿಲಿಯಮ್ ಡಿಸೋಜ, ರಮೇಶ ನಾಯಕ ಮೈರಾ, ವಿಶ್ವಸ್ಥರಾದ ಕುಡ್ಪಿ ಜಗದೀಶ ಶೆಣೈ, ವತಿಕಾ ಕಾಮತ, ಪ್ರಶಾಂತ ಶೇಟ, ರೈತಬಂಧು ಶಿವಶಂಕರ ನಾಯಕ, ಸಾಹಿತಿ ಹೆಚ್ ಎಮ್ ಪೆರ್ನಾಲ ಹಾಗೂ ಇತರ ಕೊಂಕಣಿ ಅಭಿಮಾನಿಗಳು ಉಪಸ್ಥಿತರಿದ್ದರು. ಹಿರಿಯ ಕಲಾಕಾರರುಗಳಾದ ರಾಮದಾಸ್ ಗುಲ್ವಾಡಿ, ಪ್ರಕಾಶ ಶೆಣೈ ಹಾಗೂ ಮುರಲೀಧರ ಕಾಮತರವರು ತೀರ್ಪುಗಾರರಾಗಿದ್ದರು. ಕಾರ್ಯಕ್ರಮದ ಆಂಶಿಕ ಪ್ರಾಯೋಜಕರಾದ ವಿಶ್ವಸ್ಥ ಗೋಕುಲನಾಥ ಪ್ರಭುರವರ ಶುಭಸಂದೇಶವನ್ನು ಓದಿ ಸಂಸ್ಥೆಯ ಖಜಾಂಚಿ ಬಿ.ಆರ್.ಭಟ್ಟರವರು ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

