ದಾವಣಗೆರೆ-ಡಿಸೆಂಬರ್, ದಾನಿಗಳ ಊರಾದ ದಾವಣಗೆರೆಯ ಶ್ರೇಷ್ಠ ದಾನಿಗಳಾದ ನಗರದ ಅಪ್ಪಾಜಿ ಎಂದೇ ಖ್ಯಾತರಾದ ಅದಮ್ಯ ಹಿರಿಯ ಚೇತನ ಡಾ. ಶಾಮನೂರು ಶಿವಶಂಕರಪ್ಪನವರು ಸ್ವರ್ಗಸ್ಥರಾಗಿದ್ದು ದಾವಣಗೆರೆಯ “ಸಿನಿಮಾ ಸಿರಿ” ಚಲನಚಿತ್ರ ಕ್ರಿಯಾತ್ಮಕ ಸಂಸ್ಥೆಯವತಿಯಿಂದ ಸಂತಾಪ ವ್ಯಕ್ತಪಡಿಸಿ ಭಾವಪೂರ್ನ ಶ್ರದ್ಧಾಂಜಲಿ ಅರ್ಪಿಸಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ಹಾಗೂ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ದಯಪಾಲಿಸಲಿ ಎಂದು ಭಗವಂತನಲ್ಲಿ “ಸಿನಿಮಾಸಿರಿ”ಯ ಅಧ್ಯಕ್ಷರಾದ ಅಂದನೂರು ಮುಪ್ಪಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಆರ್.ಟಿ.ಮೃತುಂಜಯ ಸೇರಿದಂತೆ ಸರ್ವ ಸದಸ್ಯರು, ಪದಾಧಿಕಾರಿಗಳು ಪ್ರಾರ್ಥಿಸಿದ್ದಾರೆ.
Home Uncategorized ಸ್ವರ್ಗಸ್ಥರಾದ ಡಾ. ಶಾಮನೂರು ಶಿವಶಂಕರಪ್ಪನವರಿಗೆ “ಸಿನಿಮಾಸಿರಿ”ಯಿಂದ ಸಂತಾಪ ಭಾವಪೂರ್ಣ ಶ್ರದ್ಧಾಂಜಲಿ

