ಮೂಡುಬಿದಿರೆ: ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ಇಂದು ಆರದಿರಲಿ ಬದುಕು ಆರಾಧನ ತಂಡದ ಅಗಸ್ಟ್ ತಿಂಗಳ 101 ನೇ ಯೋಜನೆಯ ಸಹಾಯ ಹಸ್ತವನ್ನು ದಕ್ಷಿಣ ಕನ್ನಡ ಜಿಲ್ಲೆಯ ಪಾದೂರು ಗ್ರಾಮದ ವಳದೂರಿನ ಅಪ್ಪು ಭಂಡಾರಿ ಅವರಿಗೆ ನೀಡಲಾಯಿತು.
ಇವರು ಶುಗರ್ ನಿಂದ ಒಂದು ಕಾಲು ಕಳೆದು ಕೊಂಡಿದ್ದು, ಪ್ಲಾಸ್ಟಿಕ್ ಕಾಲು ಅಳವಡಿಸಲಾಗಿದೆ. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆ ಯಲ್ಲಿ ಹೆಚ್ಚಿನ ಚಿಕಿತ್ಸೆ ನಡೆಯಲಿದೆ. ಅವರು ಕಡು ಬಡವರಾಗಿದ್ದು ಅವರ ಕಷ್ಟ ಅರಿತ ನಮ್ಮ ತಂಡ ಅವರಿಗೆ ಮೂಡುಬಿದಿರೆಯ ಸಮಾಜ ಮಂದಿರದ ಆವರಣದಲ್ಲಿ ಸಹಾಯ ಹಸ್ತ ನೀಡಲಾಯಿತು. ಈ ಸಂದರ್ಭದಲ್ಲಿ ತಂಡದ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ, ಅಭಿಷೇಕ್ ಶೆಟ್ಟಿ ಐಕಳ ಅರಣ್ ಅಜೆಕಾರು, ಸದಸ್ಯರಾದ ದೀನ್ ರಾಜ್, ಬಸವರಾಜ, ಮಂತ್ರಿ ಭಾಸ್ಕರ ದೇವಾಡಿಗ , ಗಣೇಶ್ ಪೈ , ಡಾ.ನಾಗರಾಜ ಶೆಟ್ಟಿ ಅಂಬೂರಿ .ಧನಂಜಯ ಶೆಟ್ಟಿ. ನಿಲೇಶ್ ಕಟೀಲು ಪ್ರವೀಣ್ ಬಂಗೇರ ..ಶ್ರೀಕಾಂತ ಭಟ್ ಪೊನ್ನ ಗಿರಿ ಪ್ರಭಾಕರಮಂಗಳೂರು ದಯಾನಂದ ಮಡ್ಕೇಕರ್. ಬೀಮಯ್ಯ ಸುಳ್ಯ. ಅಗರಿ ರಾಘವೇಂದ್ರ ರಾವ್. ಭಾಸ್ಕರ ದೇವಸ್ಯ ದಿನೇಶ್ ಸಿದ್ದಕಟ್ಟೆ. ನಾಗರಾಜ ಸಾಲ್ಯನ್ ಶಾರದಾ ಅಂಚನ್ ರಂಗನಾಥ್ ರಾವ್ ಪಕ್ಷಿಕೆರೆ ಉಪಸ್ಥಿತರಿದ್ದರು.