ಮಂಜೇಶ್ವರ : ಕುಡಾಲು ಕನಕಪ್ಪಾಡಿ ತರವಾಡು ಮನೆ ಹಾಗೂ ದೈವಚಾವಡಿಯ ಕೋಡಿಂಗಾರು ಶಾಖೆಯ ವತಿಯಿಂದ ಧೂಮಾವತಿ ಮತ್ತು ಪರಿವಾರ ದೈವಗಳ ಹರಕೆಯ ನೇಮೋತ್ಸವವು ಮಾರ್ಚ್ ಆರರಂದು ಹೊರೆ ಕಾಣಿಕೆ ಸಮರ್ಪಣೆಯೊಂದಿಗೆ ಆರಂಭಗೊಂದು ಮಾರ್ಚ್ ಎಂಟರಂದು ಸಮಾಪ್ತಿಗೊಂಡಿತ್ತು.

ಮಾರ್ಚ್ 8ಕ್ಕೆ ಬೆಳಿಗ್ಗೆ 10 ಗಂಟೆಗೆ ಧರ್ಮ ದೈವ ಧೂಮಾವತಿ ದೈವದ ನೇಮ, ಮಧ್ಯಾಹ್ನ 12ಗಂಟೆಗೆ: ಪ್ರಸಾದ ವಿತರಣೆ ನಂತರ ಅನ್ನದಾನ, ಸಂಜೆ 3ಗಂಟೆಗೆ ಗುಳಿಗ ದೈವದ ಕೋಲ ಸಂಜೆ 4ಗಂಟೆಗೆ ಭಂಡಾರ ಇಳಿಯುವುದರೊಂದಿಗೆ ನೇಮೋತ್ಸವ ಸಮಾಪ್ತಿಗೊಂಡಿತ್ತು.


