
ಮೂಡುಬಿದಿರೆ :ಪಂಚಾಯಿತಿ ಪರವಾನಗೆ ರಹಿತ ಹಾಗೂ ವಿವಿಧ ಇಲಾಖೆಗಳ ನಿಯಮ ಉಲ್ಲಂಘಿಸಿ ಪುತ್ತಿಗೆ ಗ್ರಾಪಂ ವ್ಯಾಪ್ತಿಯ ಹಂಸನಗರ ಬಳಿ ಕಾರ್ಯಾಚರಿಸುತ್ತಿದ್ದ ಲಾಂಡ್ರಿ ಫಾಕ್ಟರಿಗೆ ಗ್ರಾಪಂ ಸೋಮವಾರ ಬೀಗ ಮುದ್ರೆ ಹಾಕಿದೆ.
ಭೂಪರಿವರಿವರ್ತನೆ ಆಗದೇ, ಮೂಡಾ ಹಾಗೂ ಪರಿಸರ ನಿಯಂತ್ರಣ ಮಂಡಳಿಯ ಅನುಮತಿ ಇಲ್ಲದೇ ಮೇ.ಕ್ಲೀನ್ & ಕ್ರಿಸ್ಟ್ ಲಾಂಡ್ರಿ ಕಳೆದ ಕೆಲವು ವರ್ಷಗಳಿಂದಕಾರ್ಯಾಚರಿಸುತ್ತಿರುವ ಮೇ.ಕ್ಲೀನ್ & ಕ್ರಿಸ್ಟ್ ಲಾಂಡ್ರಿ ಫ್ಯಾಕ್ಟರಿ ವಿರುದ್ಧ ಸ್ಥಳೀಯರಿಂದಲೂ ವಿರೋಧ ವ್ಯಕ್ತವಾಗಿತ್ತು. ಫ್ಯಾಕ್ಟರಿಯಿಂದ ಹೊರಬರುವ ರಾಸಾಯನಿಕಗಳನ್ನು ಒಳಗೊಂಡ ತ್ಯಾಜ್ಯ ನೀರನ್ನು ಸಂಸ್ಕರಿಸದೇ ತೊಟ್ಟಿಯಲ್ಲಿ ಸಂಗ್ರಹಿಸಿ ರಾತ್ರಿ ವೇಳೆ ಸಾರ್ವಜನಿಕ ಚರಂಡಿಗೆ ಹರಿಯ ಬಿಡುತ್ತಿದ್ದರಿಂದ ಹಂಸನಗರದ ಸುತ್ತಮುತ್ತಲಿನ ನಿವಾಸಿಗಳ ಕುಡಿಯುವ ನೀರಿನ ಬಾವಿ,ಕೊಳಬಾವಿಗಳು ಸಂಪೂರ್ಣ ರಾಸಾಯನಿಕ ಮಿಶ್ರಿತಗೊಂಡು ಕುಡಿಯಲು ಅಯೋಗ್ಯವಾಗಿದ್ದು, ಈ ಬಗ್ಗೆ ಸಾರ್ವಜನಿಕರು ಡಿಸೆಂಬರ್ 2024 ರಲ್ಲಿ ಪಂಚಾತಿಗೆ ದೂರು ನೀಡಿದ್ದರು. ಈ ಬಗ್ಗೆ ಎಚ್ಚೆತ್ತುಗೊಂಡ ಸ್ಥಳಿಯಾಡಳಿತ ಮೇ.ಕ್ಲೀನ್ & ಕ್ರಿಸ್ಟ್ ಲಾಂಡ್ರಿ ಫ್ಯಾಕ್ಟರಿಗೆ 2024ರ ಡಿಸೆಂಬರ್ 13ರಂದು ಬೀಗ ಮುದ್ರೆ ಹಾಕುವ ಆದೇಶ ಜಾರಿ ಮಾಡಿತ್ತು. ಪಂಚಾಯಿತಿ ಆದೇಶವನ್ನು ಪ್ರಶ್ನಿಸಿ ಲಾಂಡ್ರಿ ಮಾಲೀಕರು ಹೈಕೋರ್ಟ್ ದಾವೆ ಹೂಡಿ 2025 ಮೇ ಒಳಗೆ ಲಾಂಡ್ರಿ ಫ್ಯಾಕ್ಟರಿಯನ್ನು ಬೇರೆಡೆಗೆ ಸ್ಥಳಾಂತರಿಸುತ್ತೇನೆ .ಅದುವರೆಗೆ ಲಾಂಡ್ರಿ ಫ್ಯಾಕ್ಟರಿಗೆ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದೆಂದು ತಡೆಯಾಜ್ಞೆ ತಂದಿದ್ದರು.
ತಡೆಯಾಜ್ಞೆ ಅವಧಿ ಮುಗಿದಿದ್ದರೂ ಲಾಂಡ್ರಿ ಫ್ಯಾಕ್ಟರಿಯು ರಾಜಾರೋಷವಾಗಿ ತನ್ನ ಕಾರ್ಯಚಟುವಟಿಕೆಯನ್ನು ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ಪಂಚಾಯಿತಿ ದೂರು ಸಲ್ಲಿಸಿ, ಕ್ರಮ ಕೈಗೊಳ್ಳದಿದ್ದಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಎಚ್ಚೆತ್ತುಗೊಂಡ ಪಂಚಾಯಿತಿ ಪಿಡಿಒ ಬೀಮಾನಾಯ್ಲದ ಕ್ರಮ ತೆಗೆದುಕೊಂಡಿದ್ದಾರೆ..
ಪಿಡಿಒಗೆ ಬೆದರಿಕೆ
ದಿಟ್ಟ ನಿರ್ಧಾರವನ್ನು ಕೈಗೊಂಡು ಲಾಂಡ್ರಿ ಫ್ಯಾಕ್ಟರಿಗೆ ಬೀಗ ಮುದ್ರೆ ಹಾಕಲು ಹೋಗಿದ್ದ ಪುತ್ತಿಗೆ ಗ್ರಾಪಂ ಪಿಡಿಒ ಭೀಮ ನಾಯಕ್ ಬಿ.ಅವರಿಗೆ ಲಾಂಡ್ರಿಯ ಮಾಲಕ ಮೊಬೈಲ್ ಕರೆಯ ಮೂಲಕ ಧಮ್ಕಿ ಹಾಕಿರುವುದಾಗಿ ತಿಳಿದು ಬಂದಿದೆ.
ಎಂಬಿಡಿ_ಜೂನ್23_4
ಮೂಡುಬಿದಿರೆ ಹಂಸನಗರ ಬಳಿ ಅನಧಿಕೃತ ಕಾರ್ಯಾಚರಿಸುತ್ತಿದ್ದಲಾಂಡ್ರಿಗೆ ಪುತ್ತಿಗೆ ಗ್ರಾಪಂ ಬೀಗ ಮುದ್ರೆ ಹಾಕಿದೆ