ಶೀರೂರು ಮಠದ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ

0
61

ವರದಿ ವಿನೋದ್ ಶೆಟ್ಟಿ ಉಡುಪಿ

ಉಡುಪಿ‌ ಶ್ರೀ ಕೃಷ್ಣ ಮಠದ ರಥಬೀದಿಯ ಕನಕನ‌ ಕಿಂಡಿ ಮುಂಭಾಗದಲ್ಲಿ ನಡೆಯಿತು.‌ ಖ್ಯಾತ ಸಾಹಿತಿ ಶ್ರೀ ‌ಕಬ್ಬಿನಾಲೆ ವಸಂತ ಭಾರದ್ವಾಜ್ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿದರು. ಇದೇ ಸಂದರ್ಭದಲ್ಲಿ ಮನೆ ಮನೆಗೆ ಆಹ್ವಾನ ಪತ್ರಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಶ್ರೀ ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯರವರು ಕೃಷ್ಣನ ಸನ್ನಿಧಾನದಲ್ಲಿ ಆಹ್ವಾನ‌ಪತ್ರಿಕೆ ಇಟ್ಟು ಪ್ರಾರ್ಥನೆ ಸಲ್ಲಿಸಿದರು. ಪರ್ಯಾಯ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಮಟ್ಟಾರ್ ರತ್ನಾಕರ ಹೆಗ್ಡೆ, ಕೋಶಾಧಿಕಾರಿಗಳಾದ ಜಯಪ್ರಕಾಶ್ ಕೆದ್ಲಾಯ, ಸಂಚಾಲಕರಾದ ಸುಪ್ರಸಾದ್ ಶೆಟ್ಟಿ , ಜೊತೆ ಕಾರ್ಯದರ್ಶಿಗಳಾದ ಸಂದೀಪ್ ಮಂಜ, ಶ್ರೀಕಾಂತ ನಾಯಕ್, ಮಹಿಳಾ ಸಮಿತಿಯ ಸಂಚಾಲಕರುಗಳಾದ ಪದ್ಮಾ ರತ್ನಾಕರ,ನಯನ ಗಣೇಶ್, ವೀಣಾ ಶೆಟ್ಟಿ,ತಾರಾ ಆಚಾರ್ಯ, ನೀತಾಪ್ರಭು,ಪ್ರಮುಖರಾದ ಉದಯಕುಮಾರ್ ಶೆಟ್ಟಿ ಕಿದಿಯೂರು, ಕಿಶನ್ ಹೆಗ್ಡೆ ಕೊಳ್ಕೆಬೈಲು,ಶ್ರೀಕಾಂತ್ ಉಪಾಧ್ಯಾಯ, ಹರೀಶ್ ಬೈಲಕೆರೆ ಮತ್ತು ವಿವಿಧೆಡೆಯಿಂದ ಆಗಮಿಸಿದ ಕೃಷ್ಣ ಭಕ್ತರು ಉಪಸ್ಥಿತರಿದ್ದರು.


ಇಂದಿನಿಂದ ಪ್ರತಿಯೊಬ್ಬ ಕ್ರಷ್ಣಭಕ್ತರೂ ತಮ್ಮ ತಮ್ಮ ಮನೆಯ ಸುತ್ತಮುತ್ತಲಿರುವ ಮನೆಗಳಿಗೆ ತಾವೇ ಆಹ್ವಾನಪತ್ರಿಕೆ ಕೊಡುವ ಮೂಲಕ ಎಲ್ಲರೂ ಈ ಅಭಿಯಾನದಲ್ಲಿ ಜೋಡಿಸಿಕೊಂಡು ಉಡುಪಿ ಜಿಲ್ಲೆಯ ಎಲ್ಲ ಮನೆಗಳಿಗೂ ಕ್ರಷ್ಣ ಭಕ್ತರೇ ಆಹ್ವಾನ ಪತ್ರಿಕೆ ತಲುಪಿಸಬೇಕೆಂದು ಶ್ರೀ‌ಮಠದ ವತಿಯಿಂದ ವಿನಂತಿಸಲಾಯಿತು.


LEAVE A REPLY

Please enter your comment!
Please enter your name here