ಕಲ್ಲಮುಂಡ್ಕೂರು: LC ನಿಡ್ಡೋಡಿ ಕಲ್ಲಮುಂಡ್ಕೂರಿನ ಪದಗ್ರಹಣ ಕಾರ್ಯಕ್ರಮವು ಜು. ೨೭ರಂದು ನಿಡ್ಡೋಡಿ ಶ್ರೀ ನಾರಾಯಣಗುರು ಸಭಾಭವನದಲ್ಲಿ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು IPP ಲಯನ್ ಸರಿತಾ ಜಿ. ಶೆಟ್ಟಿ ವಹಿಸಿ, ಪದಗ್ರಹಣ ಅಧಿಕಾರಿಯಾಗಿ 1st VDG, H.M ತಾರಾನಾಥ್ ರವರು ನೆರವೇರಿಸಿ ಕೊಟ್ಟರು. 2nd VDG ಹಾಗು ಗೈಡಿಂಗ್ ಲಯನ್ ಗೋವರ್ಧನ್ ಶೆಟ್ಟಿ ನೂತನ 7ಸದಸ್ಯರ ಸೇರ್ಪಡೆ ಮಾಡಿದರು.
IPDG ಲಯನ್ B.M ಭಾರತಿ ಸುಮಾರು 2.5 ಲಕ್ಷದ ಸಮಾಜ ಸೇವೆಗೆ ಶ್ಲಾಘನೆಗೈದರು. ಈ ಸಂದರ್ಭದಲ್ಲಿ ಶಿಕ್ಷಕರರಾದ ಸದಾನಂದ ಪೂಜಾರಿ ಹಾಗು ನಿವೃತ ಆರ್ಮಿ ಚಂದಪ್ಪ ದಾಸ್ ಇವರನ್ನು ಸನ್ಮಾನ ಮಾಡಲಾಯಿತು. Adtnl.ಕ್ಯಾಬಿನೆಟ್ ಕಾರ್ಯದರ್ಶಿ ಚಂದ್ರಹಾಸ್ ರೈ ಹಾಗು ಕ್ಯಾಬಿನೆಟ್ ಕೋಶಾಧಿಕಾರಿ ಬಾಲಕೃಷ್ಣ ಹೆಗ್ಡೆ ಉಪಸ್ಥಿತರಿದ್ದರು. ನೂತನ ಅಧ್ಯಕ್ಷನಾಗಿ ಲಯನ್ ಸಂದೀಪ್ ಸುವರ್ಣ, ಕಾರ್ಯದರ್ಶಿ ರಾಜಪ್ರಸಾದ್, ಕೋಶಾಧಿಕಾರಿ ಸೆಲಿನ್ ಸಿಕ್ವೆರ ಆಯ್ಕೆಯಾದರು. ಲಯನ್ ಗಣೇಶ್ ಶೆಟ್ಟಿ ಹಾಗು ಗಿರೀಶ್ ಕೊಂಚಾಡಿ ಕಾರ್ಯಕ್ರಮ ನಿರೂಪಿಸಿದರು.