Friday, June 13, 2025
Homeಮುಲ್ಕಿಮುಲ್ಕಿ: ದಿ. ವಿಟ್ಟಪ್ಪ ಭಾಗವತ ರ ಪುತ್ರ ಶ್ರೀನಿವಾಸ ಭಾಗವತ್ ನಿಧನ

ಮುಲ್ಕಿ: ದಿ. ವಿಟ್ಟಪ್ಪ ಭಾಗವತ ರ ಪುತ್ರ ಶ್ರೀನಿವಾಸ ಭಾಗವತ್ ನಿಧನ

ಮುಲ್ಕಿ: ಇಲ್ಲಿನ ದಿ. ವಿಟ್ಟಪ್ಪ ಭಾಗವತ ರ ಪುತ್ರ ಶ್ರೀನಿವಾಸ ಭಾಗವತ್ (70) ಅನಾರೋಗ್ಯದಿಂದ ಭಾನುವಾರ ಬೆಳಿಗ್ಗೆ ನಿಧನರಾದರು.
ಅವರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಮುಲ್ಕಿ ಪರಿಸರದಲ್ಲಿ , ಜವಳಿ ಅಂಗಡಿಯ ಮಾಲೀಕರಾಗಿ ಖ್ಯಾತ ಗಾಯಕರಾಗಿ ಪ್ರಸಿದ್ಧಿ ಪಡೆದಿದ್ದರು.
ಅವರ ನಿಧನಕ್ಕೆ ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಶಾಸಕ ಉಮಾನಾಥ ಕೋಟ್ಯಾನ್, ಮಾಜೀ ಸಚಿವ ಅಭಯ ಚಂದ್ರ ಜೈನ್, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು,
ಮುಲ್ಕಿ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಅತುಲ್ ಕುಡ್ವ, ಪಾಂಡುರಂಗ ಭಟ್ ಎಸ್ ವಿ ಟಿ,
ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್, ಮಾಜೀ ಅಧ್ಯಕ್ಷ ಸುನಿಲ್ ಆಳ್ವ ಮುಖ್ಯಾಧಿಕಾರಿ ಮಧುಕರ್,ಸದಸ್ಯರಾದ ಹರ್ಷರಾಜ ಶೆಟ್ಟಿ, ಪುತ್ತುಭಾವ, ಸುಭಾಶ್ ಶೆಟ್ಟಿ, ಮಂಜುನಾಥ ಕಂಬಾರ್, ಬಾಲಚಂದ್ರ ಕಾಮತ್, ಭೀಮಾಶಂಕರ್, ಲೋಕೇಶ್ ಕೋಟ್ಯಾನ್, ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ ಬರ್ನಾಡ್, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಡಿಸಿಸಿ ಸದಸ್ಯ ಧನಂಜಯ ಮಟ್ಟು,ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ,ವಿಜಯ ರೈತ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್, ಸತೀಶ್ ಭಂಡಾರಿ, ಡಾ. ಹರೀಶ್ಚಂದ್ರ ಪಿ ಸಾಲ್ಯಾನ್,ಉದಯ್ ಕುಮಾರ್ ಶೆಟ್ಟಿ ಅಧಿಧನ್, ಲ. ಕಿಶೋರ್ ಶೆಟ್ಟಿ ಬಪ್ಪನಾಡು, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಗೌರವಾಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ,ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ನ ಸ್ಥಾಪಕ ಅಧ್ಯಕ್ಷ ವೆಂಕಟೇಶ ಹೆಬ್ಬಾರ್,ಮಾಜೀ ಅಧ್ಯಕ್ಷ ಸುದೀರ್ ಬಾಳಿಗ, ಪುಷ್ಪರಾಜ ಚೌಟ ,,ಜೋನ್ ಕ್ವಾಡ್ರಸ್ , ಶರತ್ ಕಾರ್ನಾಡ್,ಧರ್ಮಾನಂದ ಶೆಟ್ಟಿಗಾರ್ ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular