ಉಡುಪಿ ಅಭಿವೃದ್ಧಿಯ ಬಗ್ಗೆ ಮಾಸ್ಟರ್ ಪ್ಲಾನ್ ತಯಾರಿ : ಆಯುಕ್ತರಾದ ಮಂಜುನಾಥ್

0
31

ಉಡುಪಿ : ಸಿವಿಲ್ ಎಂಜಿನಿಯರ್ಸ್‌ ಅಸೋಸಿಯೇಶನ್ (ಯುಸಿಇಎ) ವತಿಯಿಂದ ಕಿದಿಯೂರು ಹೊಟೇಲ್‌ನ ಅನಂತಶಯನ ಹಾಲ್‌ನಲ್ಲಿ ಬುಧವಾರ ಎಂಜಿನಿಯರ್ಸ್‌ ಮೀಟ್  ನೆಡೆಯಿತು .

ಮುಖ್ಯ ಅತಿಥಿಯಾಗಿ  ಉಡುಪಿ  ನಗರಾಭಿವೃದ್ದಿ ಪ್ರಾಧಿಕಾರದ  ಆಯುಕ್ತರಾದ  ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಭವಿಷ್ಯದ ದ್ರಷ್ಠಿಯಿಂದ  ಉಡುಪಿ ಅಭಿವೃದ್ಧಿಯ ಬಗ್ಗೆ  ಮಾಸ್ಟರ್ ಪ್ಲಾನ್ ತಯಾರಿಸಿದ್ದು , ಅದಕ್ಕೆ ಪೂರಕವಾದ ಸೂಕ್ತ  ಸಲಹೆ  ಸೂಚನೆ ನೀಡುವಂತೆ ವಿನಂತಿಸಿದರು ,  ಉಡುಪಿ ಪ್ರಸಿದ್ಧಿ ಜತೆಗೆ ವೇಗದ ಪ್ರಗತಿ ಹೊಂದಲು ಎಂಜಿನಿಯರ್ಸï ಗಳ ಕೊಡುಗೆ ಅಪಾರ ,  ರಸ್ತೆ, ಕಟ್ಟಡಗಳ  ನಿರ್ಮಾಣ ಕ್ಷೇತ್ರಕ್ಕೆ ನೀಡಿದ  ಕೊಡುಗೆ ಶ್ಲಾಘನೀಯ. ಉಡುಪಿ ನಗರದ ಸೌಂದರ್ಯ ಹೆಚ್ಚಳಕ್ಕೂ  ಎಂಜಿನಿಯರ್ ಗಳು ಕೈ ಜೋಡಿಸುವಂತೆ ಕರೆನೀಡಿದರು.                                                                                                                                                                                                                                                                                                                                                                                    (ಯುಸಿಇಎ) ವತಿಯಿಂದ     ಉಡುಪಿ  ನಗರಾಭಿವೃದ್ದಿ ಪ್ರಾಧಿಕಾರದ  ಆಯುಕ್ತರಾದ  ಮಂಜುನಾಥ್  ಗೌರವಿಸಲಾಯಿತು  ವೇದಿಕೆಯಲ್ಲಿ ಇತ್ತೀಚಿಗೆ ನಿರ್ಮಾಣ ಗೊಂಡ  ” ಅಭಿನಯ”  ಕಿರುಚಿತ್ರ ಪ್ರದರ್ಶನ ಗೊಂಡಿತ್ತು ,  ಸಂಸ್ಥೆಯ ವತಿಯಿಂದ   ಕಥೆ  ನಿರೂಪಕ ನಿರ್ದೇಶಕರಾದ  ಗಣೇಶ್ ಕಾಂಡ್ಲೂರು  ರವರನ್ನು ಗೌರವಿಸಲಾಯಿತು. 

ಸಂಸ್ಥೆಯ ಅಧ್ಯಕ್ಷ ಕೆ. ರಂಜನ್ ಸ್ವಾಗತಿಸಿದರು, ಉಪಾಧ್ಯಕ್ಷರಾದ  ಗಣೇಶ್ ಬೈಲೂರು,ಭರತ್ ಭೂಷಣ್, ಪ್ರಧಾನ ಕಾರ್ಯದರ್ಶಿ ಕೆ. ಹರೀಶ್ ಕುಮಾರ್  ನಿರೂಪಿಸಿ, ವಂದಿಸಿದರು, ಸಂಘದ ಪಧಾದಿಕಾರಿಗಳು, ಸದಸ್ಯರು ಉಪಸ್ಥರಿದ್ದರು.