ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶ್ರೀ ಲಲಿತಾ ಮಹಾ ತ್ರಿಪುರ ಸುಂದರಿ ಮಹಾ ಯಾಗವು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ವಿಕ್ಯಾತ್ ಭಟ್ ಇವರ ನೇತೃತ್ವದಲ್ಲಿ ನೆರವೇರಲಿದೆ..
ಸೇವಾರ್ತಿಯ ಪರವಾಗಿ ಪ್ರಾಯಶ್ಚಿತಪೂರ್ವಕವಾಗಿ ನೆರವೇರಲಿರುವ
ಈ ಮಹಾನ್ ಯಾಗವು ಬಹು ವಿಶಿಷ್ಟ ಅಪರೂಪವೂ ಆಗಿದ್ದು ಶ್ರೀ ಚಕ್ರಪೀಠಾದೀಶ್ವರಿಯಾದ ಶ್ರೀ ರಾಜರಾಜೇಶ್ವರಿಯ ವಿಶೇಷ ಅನುಗ್ರಹಕ್ಕಾಗಿ
ಸಹಸ್ರ ಸಹಸ್ರ ಸಂಖ್ಯೆಯ ಕದಳಿಹಣ್ಣನ್ನು ತ್ರಿಮಧುರಯುಕ್ತ ವಾಗಿ ಹೋಮಿಸಿ ವಿಧ ವಿಧದ ಕುಸುಮಗಳಿಂದ ಅರ್ಚನಾದಿಗಳನ್ನು ನೆರವೇರಿಸಿ ಆಕೆಗೆ ಪ್ರಿಯವಾದ ನೈವೇದ್ಯವನ್ನ ಸಮರ್ಪಿಸಿ ಪ್ರಸನ್ನ ಪೂಜೆ ನೆರವೇರಿಸಲಾಗುತ್ತದೆ..
ಯಾಗದ ಅಂಗವಾಗಿ ಸುವಾಸಿನಿ ಆರಾಧನೆ ಮಹಾ ಅನ್ನಸಂತರ್ಪಣೆ ನೆರವೇರಿಸಲಾಗುತ್ತದೆ.. ಬಹು ಫಲಪ್ರದವಾದ ಈ ಯಾಗದಲ್ಲಿ ಪಾಲ್ಗೊಂಡು ಕೃತಾರ್ಥರಾಗಬಹುದು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.
Home Uncategorized ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರಶ್ರೀ ಲಲಿತ ಮಹಾ ತ್ರಿಪುರ ಸುಂದರಿ...
