ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ ಉಡುಪಿ : ಶ್ರೀ ಗುರು ಪೂರ್ಣಿಮಾ ಹಾಗೂ ಭಜನಾ ಮೋಹೋತ್ಸವ

0
20

ಉಡುಪಿ :   ಶ್ರೀದೇವರ  ಸನ್ನಿಧಿಯಲ್ಲಿ ಶ್ರೀ ಗುರು ಪೂರ್ಣಿಮಾ ಕಾರ್ಯ ಕ್ರಮ ಭಜನಾ ಮೋಹೋತ್ಸವ  , ಶ್ರೀ ನಿತ್ಯಾನಂದ ಸ್ವಾಮೀಜಿಗೆ ಪಂಚಾಮೃತ ಅಭಿಷೇಕ , ಸೀಯಾಳ ಅಭಿಷೇಕ  ನಡೆಯಿತು , ಶ್ರೀ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ , ಮಹಾ ಮಂಗಳಾರತಿ ಜರಗಿತು.

 ಭಜನಾ ಮೋಹೋತ್ಸವ ಕೆ  ಮಂದಿರದ ಅರ್ಚಕರಾದ  ಸತ್ಯೇಂದ್ರ ಮಹಾರಾಜ್  ದೀಪ ಬೆಳಗಿಸಿ ಚಾಲನೆ ನೀಡಿದರು .  ಟ್ರಸ್ಟಿಗಳಾದ  ಕೆ ದಿವಾಕರ್ ಶೆಟ್ಟಿ ತೋಟದಮನೆ ಕೊಡವೂರು ,  ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಬನ್ನಂಜೆ , ಕಾರ್ಯದರ್ಶಿ ಈಶ್ವರ  ಶೆಟ್ಟಿ ಚಿಟ್ಪಾಡಿ , ವಿಜಿ ಶೆಟ್ಟಿ , ವಿಶ್ವನಾಥ್ ಸನಿಲ್  , ಶ್ರೀಮತಿ  ಬಿಂದು ಶೆಟ್ಟಿ ,  ಹರ್ಷದ ಸೂರ್ಯ ಪ್ರಕಾಶ್ ,     ತೋನ್ಸೆ ನವೀನ್ ಶೆಟ್ಟಿ  , ಮೋಹನ್ ಚಂದ್ರ  ನಂಬಿಯಾರ್  ,  ತಾರಾನಾಥ್ ಮೇಸ್ತ  , ಅರ್ಚಕರಾದ ಸುಧಾಕರ್ ಶಾಂತಿ ,  ಓಂ ಪ್ರಕಾಶ್ , ಟ್ರಸ್ಟಿಗಳು ಆಡಳಿತ ಮಂಡಳಿಯ ಸದಸ್ಯರು , ಸೇವಾ ಸಮಿತಿಯ ಸದಸ್ಯರು   ಉಪಸ್ಥರಿದ್ದರು , ಉಡುಪಿ ಶಾಸಕರಾದ ಯಶಪಾಲ್ ಸುವರ್ಣ ಮಂದಿರಕ್ಕೆ  ಭೇಟಿನೀಡಿದರು ಮಂದಿರದ ವತಿಯಿಂದ ಶ್ರೀದೇವರ ಪ್ರಸಾದ ದೊಂದಿಗೆ ಗೌರವಿಸಲಾಯಿತು , ಹರ್ಷ ಬಳಗದವರಿಂದ ಭಜನಾ ಕಾರ್ಯಕ್ರಮ ಆರಂಭ ಗೊಂಡು ನಿರಂತರ  ಭಜನೆ ನೆಡೆಯಿತು  , ಮಧ್ಯಾಹ್ನ ಮಹಾಪೂಜೆಯ ಬಳಿಕ  ಸಾವಿರಾರರು ಭಕ್ತರೊ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ  ಪಾಲ್ಗೊಂಡರು .