ಮೂಡುಬಿದಿರೆ ಕಾಂಗ್ರೆಸ್ ಮುಖಂಡರಾಗಿದ್ದ ದಿ.ರಾಘು ಕೋಟ್ಯಾನ್ ಸಂಪಿಗೆ ಅವರ ಪುತ್ರ ಶಶಿಧರ್ ಕೋಟ್ಯಾನ್ ಅವರು ಮುಂಬೈ ರೈಲ್ವೆ ಟ್ರಾಕ್ ನಲ್ಲಿ ಶವ ಪತ್ತೆಯಾಗಿದೆ.
ಮುಂಬೈನಲ್ಲಿ ಉದ್ಯೋಗದಲ್ಲಿದ್ದ ಶಶಿಧರ್ ಅವರು ಸೋಮವಾರ ರೈಲಿನಿಂದೆಸೆಯಲ್ಪಟ್ಟು ಮೃತಪಟ್ಟಿದ್ದಾರೆಂದು ಹೇಳಲಾಗಿದ್ದು ಈ ಸಾವಿನ ಬಗ್ಗೆ ಕೆಲವು ಸಂಶಯಗಳಿದೆ. ಆತನ ಸಂಬಂಧಿಕರು ಮುಂಬೈಗೆ ತೆರಳುತ್ತಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.