ಹೆಬ್ರಿ : ಮುನಿಯಾಲು ಮಾತಿಬೆಟ್ಟು ವಾಸುಕೀ ನಗರದ ಶ್ರೀ ವಾಸುಕೀ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಷಷ್ಠಿ ಪ್ರಯುಕ್ತ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ನವಕ ಪ್ರಧಾನ ಕಲಶ, ಕಾರ್ತಿಕ ಪೂಜೆ, ತನುತಂಬಿಲ, ಸಾಮೂಹಿಕ ಆಶ್ಲೇಷಾಬಲಿ, ತುಲಾಭಾರ, ಮಹಾಪೂಜೆ, ಮಂತ್ರಾಕ್ಷತೆ ಸಾರ್ವಜನಿಕ ಅನ್ನಸಂತರ್ಪಣೆ, ಷಷ್ಠಿ ಮಹೋತ್ಸವವು ಟ್ರಸ್ಟ್ ನ ಅಧ್ಯಕ್ಷ ವಿದ್ವಾನ್ ವೇದಮೂರ್ತಿ ಮುಟ್ಲುಪಾಡಿ ರಾಘವೇಂದ್ರ ಭಟ್ ಇವರ ನೇತೃತ್ವದಲ್ಲಿ ನ.26 ರಂದು ನಡೆಯಿತು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಮಹಿಷಮರ್ಧಿನಿ ಯಕ್ಷಗಾನ ಪ್ರತಿಷ್ಠಾನ (ರಿ) ಚಾರ ಹೆಬ್ರಿ ಇವರಿಂದ ಉಲೂಪಿ ಕಲ್ಯಾಣ ಎಂಬ ಯಕ್ಷಗಾನ ತಾಳಮದ್ದಳೆ, ಸ್ಥಳೀಯ ವಿವಿಧ ಭಜನಾ ಮಾಡಳಿ ಸದಸ್ಯರಿಂದ ಭಜನೆ ನಡೆಯಿತು.

