ಉಡುಪಿ: ಕರ್ನಾಟಕ ಕರಾವಳಿ ಸುಮಾರು 320 ಕಿಮೀ ವ್ಯಾಪ್ತಿಯನ್ನು ಹೊಂದಿದ್ದು, ಮೀನುಗಾರಿಕೆ ಜೊತೆಗೆ ಹೆದ್ದಾರಿಗೆ ಸಮಾನಾಂತರವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಜಲಸಾರಿಗೆ ಯೋಜನೆ ಜಾರಿಗೊಳಿಸುವ ಚಿಂತನೆ ಇದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಲ್ಪೆ ಉಡುಪಿ&ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ ಓಷನ್ ಸ್ಪಾರ್ಕಲ್ ಲಿ. (ಅದಾನಿ ಕಂಪನಿ)ಗಾಗಿ 70 ಟನ್ ಬೋಲಾರ್ಡ್ ಪುಲ್ ಟಗ್ ನೌಕೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಮತ್ಸ$ ಸಂಪದ ಯೋಜನೆಗೆ ಸಾವಿರಾರು ಕೋಟಿ ರೂ. ಅನುದಾನ ನೀಡಲಿದ್ದು, ಹಡಗು ಮತ್ತು ಬೋಟ್ಗಳ ನಿರ್ಮಾಣ ಕ್ಷೇತ್ರಕ್ಕೂ ಬಲ ತುಂಬಲಿದೆ. ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ ಹಡಗುಗಳಿಗೆ ಬೇಡಿಕೆಯೂ ಹೆಚ್ಚಾಗಲಿದೆ. ಇದರಿಂದ ಸ್ಥಳಿಯರಿಗೂ ಹೆಚ್ಚು ಉದ್ಯೋಗಾವಕಾಶ ಲಭಿಸದೆ ಎಂದರು.
ಮುಖ್ಯ ಅತಿಥಿಗಳಾಗಿ ಓಷನ್ ಸ್ಪಾರ್ಕಲ್ನ ಮರಿಯಾ ಆನ್ಸನ್, ನಾಗಭೂಷಣ್ ರಾವ್, ವಿವೇಕ್ ದೇಸಾಯಿ, ಪ್ರಶಾಂತ್ ನಾಯರ್, ಕೊಚ್ಚಿನ್ ಶಿಪ್ಯಾರ್ಡ್ ನಿರ್ದೇಶಕ ರಾಜೇಶ್ ಗೋಪಾಲಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು. ಶಿಪ್ಯಾರ್ಡ್ ಸಿಇಒ ಹರಿಕುಮಾರ್ ಸ್ವಾಗತಿಸಿದರು. ಸವಿತಾ ಕರ್ಕೇರಾ ಕಾರ್ಯಕ್ರಮ ನಿರೂಪಿಸಿದರು