ಮಂಗಳೂರಿನಲ್ಲಿ ಅನೇಕ ಮಾರುಕಟ್ಟೆಗಳು ರಚನೆಗೊಂಡಿದ್ದರೂ ವ್ಯಾಪರಸ್ಥರು ಮಾರುಕಟ್ಟೆಯ ಒಳಗಡೆ ವ್ಯಾಪಾರ ಸಿದ್ದರಿಲ್ಲದೇ ಅನೇಕ ಮಾರುಕಟ್ಟೆಗಳು ನಿರುಪಯುಕ್ತವಾಗಿದ್ದು, ಮಂಗಳೂರಿನಲ್ಲಿ ಇದೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಬಗ್ಗೆ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ರವರು ನಗರ ಪಾಲಿಕೆ ಆಯುಕ್ತರಿಗೆ ಈ ಬಗ್ಗೆ ಕೂಡಲೇ ವಾಪಾರಸ್ಥರು ಮಾರುಕಟ್ಟೆ ಒಳಗಡೆ ವ್ಯಾಪಾರ ನಡೆಸಲು ಸೂಚಿಸಬೇಕೆಂದು ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿʼಸೋಜಾರವರ ಸಲಹೆ ಮೇರೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಅದೇ ರೀತಿ ಒಂದು ಸಭೆಯನ್ನು ನಡೆಸಬೇಕೆಂದು ಸೂಚಿಸಿದರು ಅದರಂತೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿ ಇದರ ಪ್ರಯತ್ನದ ಮೊದಲ ಫಲವಾಗಿ ಕದ್ರಿ ಮಾರುಕಟ್ಟೆಗೆ ವ್ಯಾಪಾರಸ್ಥರನ್ನು ಸ್ಥಳಾಂತರ ಮಾಡುವ ಕಾರ್ಯಕ್ರಮ ನಿನ್ನೆ ನೇರವೇರಿತು. ಶಾಸಕರಾದ ಐವನ್ ಡಿʼಸೋಜಾರವರು ಮಾರುಕಟ್ಟೆಗೆ ತೆರಳಿ ಮಾರುಕಟ್ಟೆಯ ಎಲ್ಲಾ ವ್ಯಾಪಾರಸ್ಥರ ಜೊತೆ ಮಾತುಕತೆ ನಡೆಸಿ ಅಲ್ಲಿ ಇರಬಹುದಾದ ಸಣ್ಣ ಪುಟ್ಟ ಸಲಹೆಗಳಿಗೆ ಪರಿಹಾರವನ್ನು ಕಂಡು ಹಿಡಿಯಲು ಆಯುಕ್ತರಿಗೆ ಮತ್ತು ನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಕದ್ರಿ ಮಾರುಕಟ್ಟೆಯು ಒಂದು ವಿಶೇಷ ಮಾರುಕಟ್ಟೆಯಾಗಿ ನಿರ್ವಹಣೆ ಮಾಡಬೇಕು ಹಾಗೂ ವಾಹನಗಳನ್ನು ಮಾರ್ಗದಲ್ಲಿ ನಿಲ್ಲಿಸದೇ ಪಾರ್ಕಿಂಗ್ಗೆ ಮೀಸಲಿಟ್ಟ ಜಾಗದಲ್ಲಿ ಪಾರ್ಕ್ ಮಾಡುವಂತೆ ಬರುವಂತಹ ಗ್ರಾಹಕರಿಗೆ ತಿಳಿಹೇಳಿ ಅಲ್ಲಿ ವ್ಯವಸ್ಥೆ ಮಾಡಬೇಕೆಂದು ಈ ಸಂದರ್ಭದಲ್ಲಿ ಸಾರ್ವಜನಿಕರ ಪರವಾಗಿ ನಗರಪಾಲಿಕೆ ಅಯುಕ್ತರಿಗೆ ತಿಳಿಸಲಾಯ್ತು. ನಗರಪಾಲಿಕೆಗೆ ಸಂಬಂಧಪಟ್ಟ ಇನ್ನೂ ಉಳಿದ ಮಾರುಕಟ್ಟೆಗಳಲ್ಲಿಯೂ ಕೂಡಲೇ ವ್ಯಾಪಾರವನ್ನು ಪ್ರಾರಂಭ ಮಾಡುವಂತೆಯೂ ಮತ್ತು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಯ್ತು. ಅದರಂತೆ ಕದ್ರಿ ಪಾರ್ಕಿನ ಹತ್ತಿರ ಸ್ಮಾರ್ಟ್ ಸಿಟಿಯಿಂದ ನಿರ್ಮಿಸಲಾದ ಅಂಗಡಿಗಳು ಇನ್ನೂ ಕಾರ್ಯನಿರ್ವಹಣೆ ಮಾಡದೇ ಅದು ನಿರುಪಯುಕ್ತವಾಗಿರುವ ಬಗ್ಗೆ ಕೂಡ ನಗರಪಾಲಿಕೆ ಆಯುಕ್ತರ ಗಮನಕ್ಕೆ ತರಲಾಯ್ತು ಮತ್ತು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಐವನ್ ಡಿʼಸೋಜಾ ಸೂಚಿಸಿದರು .
ಈ ಸಂದರ್ಭದಲ್ಲಿ ಅಲ್ಸ್ಟೀನ್ ಡಿʼಕುನ್ಹ, ಅರುಣ್ ಕ್ರಾಸ್ತಾ ಯೋಗಿಶ್ ನಾಯಕ್ ಇಮ್ರಾನ್ ಖಾನ್ ಮುಂತಾದವರು ಜೊತೆಗಿದ್ದರು.