“ಮೌನ ಮಾತಾದಾಗ “ಕವನ ಸಂಕಲನ ಬಿಡುಗಡೆ

0
184

ಕಾಸರಗೋಡು :ಕಾಸರಗೋಡಿನ ಭರವಸೆಯ ಕವಯತ್ರಿ ಮೇಘಾ ಶಿವರಾಜ್ ಇವರ ಕವನ ಸಂಕಲನವನ್ನು ಕನ್ನಡ ಭವನದ ಸಂದ್ಯಾ ರಾಣಿ ಟೀಚರ್ ರೂವಾರಿಯಾಗಿರುವ ಕನ್ನಡ ಭವನ ಪ್ರಕಾಶದ ಮೂಲಕ ಕೃತಿ ಪ್ರಕಟಿಸಿ ಬಿಡುಗಡೆಗೊಂಡಿತು.
ಇತ್ತೀಚಿಗೆ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ದಲ್ಲಿ ನಡೆದ “ಬೇಕಲ ರಾಮನಾಯಕ ಸಂಸ್ಮರಣೆ ಕಾರ್ಯಕ್ರಮ ದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ರಾಮಕ್ಷತ್ರಿಯ ಸಂಘಗಳ ಒಕ್ಕೂಟ ಗೌರವ ಅಧ್ಯಕ್ಷರಾಗಿರುವ ಡಾ. ರವೀಂದ್ರ ಜೆಪ್ಪು ಇವರು ರಾಮರಾಜ ಕ್ಷತ್ರಿಯ ಸೇವಾಸಂಘ ಕಾಸರಗೋಡು ಜಿಲ್ಲಾ ಅಧ್ಯಕ್ಷರಾಗಿರುವ ಶ್ರೀ ಕಮಲಾಕ್ಷ ಕಲ್ಲುಗದ್ದೆಯವರೀಗೆ ಪುಸ್ತಕ ನೀಡಿ “ಮೌನ ಮಾತಾದಾಗ “ಕೃತಿ ಬಿಡುಗಡೆಗೊಳಿಸಲಾಯಿತು. ಮಂಗಳೂರಿನ ಖ್ಯಾತ ಸಾಹಿತಿ, ಕವಿ ಡಾ. ಕೊಲಚಪ್ಪೆ ಗೋವಿಂದ ಭಟ್ ಮುನ್ನುಡಿ ಬರೆದ ಈ ಕೃತಿ ಪರಿಚಯ ಡಾ. ಗೋವಿಂದ ಭಟ್ ಮಾಡಿದರು. ವಿಶ್ವ ರಾಮಕ್ಷತ್ರಿಯ ಮಹಾಸಂಘ ಅಧ್ಯಕ್ಷರೂ ಸಾಹಿತ್ಯ ಪರಿಚಾರಕರಾದ ಶ್ರೀ ಶಶಿಧರ್ ನಾಯ್ಕ್ ಬೆನ್ನುಡಿ ಬರೆದು ಲೇಖಕಿಯನ್ನು ಹರಸಿದ್ದಾರೆ. ಕಾರ್ಯಕ್ರಮ ದಲ್ಲಿ ಕನ್ನಡ ಭವನ ಪ್ರಕಾಶನದ ಪ್ರಕಾಶಕಿ ಸಂದ್ಯಾ ರಾಣಿ ಟೀಚರ್, ಡಾ. ಕೆ. ಏನ್. ವೆಂಕಟ್ರಮಣ ಹೊಳ್ಳ, ಕೊಡಗು ಕನ್ನಡ ಭವನ ಅಧ್ಯಕ್ಷ ಬೊಳ್ಳಿಜಿರ ಬಿ. ಅಯ್ಯಪ್ಪ, ಶುಭ ನುಡಿ ಬರೆದ ವಿರಾಜ್ ಅಡೂರ್, ಕನ್ನಡ ಭವನ ಡಾ. ವಾಮನ್ ರಾವ್ ಬೇಕಲ್ ಕ. ಸಾ. ಪ. ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಸಾಹಿತಿ ಚಂದ್ರಹಾಸ ಎಂ. ಬಿ. ಚಿತ್ತಾರಿ, ಪ್ರಕಾಶ್ ಚಂದ್ರ ತೊಕ್ಕೊಟ್ಟು, ಪ್ರದೀಪ್ ಬೇಕಲ್, ರಾಜೇಶ್ ಕೋಟೆಕಣಿ ಮುಂತಾದವರಿದ್ದರು

LEAVE A REPLY

Please enter your comment!
Please enter your name here