ಬೆಳ್ಮಣ್ ಕುಂಭನಿಧಿ ಸೊಸೈಟಿಯ 2ನೇ ಮಹಾಸಭೆ

0
13

ಕುಂಭನಿಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ ಬೆಳ್ಮಣ್ ಇದರ ದ್ವಿತೀಯ ಮಹಾಸಭೆಯು ಬೆಳ್ಮಣ್ ಸೂರಜ್ ಹೋಟೆಲ್ ನಲ್ಲಿ ದಿನಾಂಕ 09-08-2026 ನೇ ಆದಿತ್ಯವಾರ ಸೊಸೈಟಿಯ ಅಧ್ಯಕ್ಷರಾದ ಕುಶ ಆರ್. ಮೂಲ್ಯ ಇನ್ನಾ ಅವರ ಅಧ್ಯಕ್ಷತೆವಹಿಸಿ 2ನೇ ವರ್ಷದ ಮಹಾಸಭೆಯನ್ನು ಉದ್ಘಾಟಸಿ ಮಾತನಾಡಿ 2025-26 ನೇ ಸಾಲಿನಲ್ಲಿ ಸೊಸೈಟಿಯು ರೂ 2.05ಲಕ್ಷ ಲಾಭಗಳಿಸಿ ಪ್ರಗತಿಗೆ ಸಹಕಾರ ನೀಡಿದ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಸೊಸೈಟಿಯ ಪ್ರಗತಿಗೆ ಸ್ವಸಹಾಯ ಸಂಘಗಳ ಪಾತ್ರ ಪ್ರಮುಖವಾಗಿದ್ದು, ಸದಸ್ಯರು ಹೆಚ್ಚಿನಉಳಿತಾಯ ಮಾಡುವ ಮೂಲಕ ಹಾಗೂ ಅಗತ್ಯವಿರುವ ಸಂದರ್ಭದಲ್ಲಿ ಸೊಸೈಟಿಯ ಸಾಲ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಮುಂದಿನ ವರ್ಷದಲ್ಲಿ ಸದಸ್ಯರಿಗೆ 2027-28ರಲ್ಲಿ ಡಿವಿಡೆಂಡ್ ನೀಡುವ ಭರವಸೆ ನೀಡಿದರು ಆಡಳಿತ ಮಂಡಳಿಯ ಸಲಹೆ-ಸೂಚನೆಗಳು ಹಾಗೂ ಸಿಬ್ಬಂದಿ ವರ್ಗದ ಪರಿಶ್ರಮ ಪ್ರಮುಖ ಕಾರಣವಾಗಿದೆ ಎಂದರು. ಈ ಸಂದರ್ಭದಲ್ಲಿ ಸೊಸೈಟಿಯ ಸಿಬ್ಬಂದಿವರ್ಗ ಹಾಗೂ ಪಿಗ್ಮಿ ಏಜೆಂಟರಿಗೆ ಪುಷ್ಪ ನೀಡಿ ಗೌರವಿಸಲಾಯಿತು.

ಸೊಸೈಟಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ 2025-26 ನೇ ಸಾಲಿನ ಲೆಕ್ಕಪತ್ರ ಮತ್ತು 2026-27ನೇ ಸಾಲಿನ ಮುಂಗಡ ಬಜೆಟ್ ಮಂಡಿಸಿದರು ಮತ್ತು ಸದಸ್ಯರಿಂದ ಅನುಮೋದನೆ ಪಡೆದುಕೊಳ್ಳಲಾಯಿತು.

ಸೊಸೈಟಿಯ ಉಪಾಧ್ಯಕ್ಷರಾದ ಜಗನ್ನಾಥ್ ಮೂಲ್ಯ ಸೊಸೈಟಿಯ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿದರು. ನಿರ್ದೇಶಕರಾದ ಗೋಪಾಲ ಮೂಲ್ಯ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಸೊಸೈಟಿಯ ಅಭಿವೃದ್ಧಿಗೆ ಸದಸ್ಯರ ಸಹಕಾರ ಅಗತ್ಯ ವೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸೊಸೈಟಿಯ ಅಧ್ಯಕ್ಷರಾದ ಕುಶ ಆರ್ ಮೂಲ್ಯ ಇನ್ನಾ ,ಉಪಾಧ್ಯಕ್ಷರಾದ ಜಗನ್ನಾಥ್ ಮೂಲ್ಯ ಬೆಳ್ಮಣ್ ನಿರ್ದೇಶಕರಾದ ಜಯರಾಮ್ ಕುಲಾಲ್ ಮುಲ್ಲಡ್ಕ, ಗೋಪಾಲ್ ಮೂಲ್ಯ ಮುಲ್ಲಡ್ಕ, ಬೊಗ್ಗು ಮೂಲ್ಯ ಬೇಲಾಡಿ.ಶಂಕರ್ ಮೂಲ್ಯ ಇನ್ನಾ, ಸುರೇಶ್ ಮೂಲ್ಯ ನಂದಳಿಕೆ, ರಾಜೇಶ್ ಕುಲಾಲ್ ಸಾಂತೂರ್, ದೀಪಕ್ ಕುಲಾಲ್ ಬೆಳ್ಮಣ್, ಗಣೇಶ್ ಮೂಲ್ಯ ಬೋಳ, ರಮಾನಂದ ಮೂಲ್ಯ ಬೆಳ್ಮಣ್, ಪ್ರತಿಮಾ ಶ್ರೀಧರ್ ಇನ್ನಾ, ಸುಗಂಧಿ ಮೂಲ್ಯ ಬೋಳ, ಮುಖ್ಯಕಾರ್ಯನಿರ್ವಹಣಾಧಿಕಾರಿ ಬ್ರಿಜೇಶ್ ಕುಲಾಲ್ ಗುಮಾಸ್ತೆ ನಿಶ್ಮಿತಾ , ಸೇವಪ್ರತಿನಿಧಿ ಆಶಾಲತಾ ವರದರಾಜ್ ಉಪಸ್ಥಿತರಿದ್ದರು, ಪಿಗ್ಮಿ ಏಜೆಂಟರು ಸುಕೇಶ್ ಕೆ ಬಂಗೇರ ಕೆದಿಂಜೆ, ಹರೀಶ್ ಸಾಂತೂರ್, ಪ್ರೀತಮ್ ನಂದಿಕೂರು, ಉಷಾ ಎಸ್ ಕುಲಾಲ್ ಮುಂಡ್ಕೂರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಸೊಸೈಟಿಯ ನಿರ್ದೇಶಕರಾದ ರಾಜೇಶ್ ಕುಲಾಲ್ ವಂದನಾರ್ಪಣೆ ನೆರವೇರಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬ್ರಿಜೇಶ್ ಕುಲಾಲ್ ಕಾರ್ಯಕ್ರಮವನ್ನು ನಿರೂಪಿಸಿದರು.