ಮಾ.28ರಂದು ಕರಾಳ ಭಾಷಾ ಮಸೂದೆ ವಿರುದ್ದ ಪ್ರತಿಭಟನಾ ಸಭೆಯು ಬೆಳ್ಳಿಗ್ಗೆ 10ಗಂಟೆಗೆ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಸಂಕೀರ್ಣದಲ್ಲಿರುವ ”ಕನ್ನಡದ ಶಕ್ತಿ ಶ್ರೀ ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ -ಸರೋಜಾದೇವಿ ಉಚಿತ ಸಾರ್ವಜನಿಕ ವಾಚನಾಲಯ”ದಲ್ಲಿ ಕನ್ನಡ ಹೋರಾಟದಲ್ಲಿ ಬಲಿದಾನಿಗಳಾದ ‘ಶಾಂತಾರಾಮ -ಸುಧಾಕರ ಆಗಿತ್ತಾಯ “ವೇದಿಕೆಯಲ್ಲಿ ಕನ್ನಡ ಪರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆಯಲಿದೆ.

