ಸಜೀಪ ಮಾಗಣೆ ಶ್ರೀ ನಡಿಯೇಲು ದೈವಂಗಳು ಶ್ರೀ ಉಳ್ಳಾಲ್ತಿ ಶ್ರೀ ನಾಲ್ಕೈತಾಯ ಪರಿವಾರ ದೈವಗಳ ಕ್ಷೇತ್ರ ಅಗರಿ ಮಾಡ ಆಲಾಡಿ ಖಾನ ಜೀರ್ಣೋದ್ಧಾರದ ಅಂಗವಾಗಿ ನೂತನ ಶಿಲಾಮಯ ಮಾಡ ತಾಮ್ರ ಹೊದಿಕೆ ಯೊ0ದಿಗೆ ನೂತನ ಧ್ವಜಸ್ತಂಬ ನಿರ್ಮಾಣದೊಂದಿಗೆ ಪುನ ಪ್ರತಿಷ್ಠೆ ಬ್ರಹ್ಮ ಕಳಶ ಉತ್ಸವವು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್. ನೇತೃತ್ವದಲ್ಲಿ ವಿದ್ಯುಕ್ತವಾಗಿ ಜರಗಿತು.

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸ್ವಸ್ತಿ ಪುಣ್ಯ ಹವಾಚನ ಭೂ ಶುದ್ದಿ ಹೋಮ ಸಪ್ತಶುದ್ಧಿ, ಗೋಪೂಜೆ, ವಾಸ್ತು ರಕ್ಷೋಘ್ನ ಹೋಮ ಸುದರ್ಶನ ಹೋಮ ವಾಸ್ತು ಬಲಿ ವಾಸ್ತು ಪೂಜೆ ಅಧಿವಾಸ ಪ್ರಾಯಶ್ಚಿತ್ತ ಹೋಮ ಆಧ್ಯ ಗಣಯಾಗ ಪಂಚಗವ್ಯ ಅಷ್ಟೋತ್ತರ ಶತ ಕಲಶ ಅಭಿಷೇಕ ಪ್ರಧಾನ ಹೋಮ ಪ್ರತಿಷ್ಠಾ ಹೋಮ ಪ್ರಾಯಶ್ಚಿತ ಶಾಂತಿ ಹೋಮ, ನೂತನ ಧ್ವಜಸ್ಥಂಭ ಶುದ್ಧೀಕರಣ, ನೂತನ ತೀರ್ಥಭಾವಿ ಶುದ್ಧೀಕರಣ, ಶಿಖರ ಪ್ರತಿಷ್ಠೆ, ಶ್ರೀ ದೈವಂಗಳಪುನ ಪ್ರತಿಷ್ಠೆ, ಸಾನಿಧ್ಯ ಕಲಶ ಅಭಿಷೇಕ, ಬ್ರಹ್ಮ ಕಲಶ ಅಭಿಷೇಕ,ಪರ್ವ ಸೇವೆ, ಪ್ರಸನ್ನ ಪೂಜೆ , ಕಲ್ಪೋ ಕ್ತಪೂಜೆ, ಮಹಾಪೂಜೆ, ಪಲ್ಲಪೂಜೆ , ಪ್ರಸಾದ ವಿತರಣೆ, ಅನ್ನದಾನದೊಂದಿಗೆ ಸಂಪನ್ನಗೊಂಡಿತು.
ಸಂಸದ ಬ್ರಿಜೇಶ್ ಚೌಟ,ಮಾಜಿ ಸಚಿವ ಬಿ ರಮಾನಾಥ ರೈ. ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಪಾಲೆ ಮಂಟಮೆ ಸಂಸಾರ.ಕಾಂತಾಡಿ ಗುತ್ತು ಗಡಿ ಪ್ರಧಾನರಾದ ಗಣೇಶ್ ನಾಯಕ್ ಯಾನೆ ಉಗ್ಗ ಶೆಟ್ಟಿ, ಬಿಜಂದಾರು ಗುತ್ತು ಶಿವರಾಮ ಭಂಡಾರಿ,ಸಜೀಪ ಗುತ್ತು ಗಡಿ ಪ್ರಧಾನರಾದ ಮುತ್ತಣ್ಣ ಶೆಟ್ಟಿ ಯಾನೆ ಕಾಳಶೆಟ್ಟಿ, ಮಾಡದಾರು ಗುತ್ತು ಗಡಿಪ್ರದಾನ ರಾಧನಾರಣ ಆಳ್ವ ಯಾನೆ ಶಶಿಧರ ರೈ. ನ ಗ್ರೀಗುತ್ತು ಜಯರಾಮ ಶೆಟ್ಟಿ, ನ ಗ್ರೀಗುತ್ತು ವಿವೇಕ್ ಶೆಟ್ಟಿ, ಜೀವನ್ ಆಳ್ವ,ಹರೀಶ್ ರೈ, ಎಸ್ ಶ್ರೀಕಾಂತ್ ಶೆಟ್ಟಿ.ದೇವಿಪ್ರಸಾದ್ ಪೂಂಜ, ಯಶೋಧರರೈ, ನಿತಿನ್ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

