ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾದ ಜಾಗತಿಕ ಆರ್ಥಿಕ ಹಿಂಜರಿತವನ್ನು ಎದುರಿಸಲು ಕೇಂದ್ರ ಸರ್ಕಾರವು ಉದ್ಯಮಿಗಳಿಗೆ ತುರ್ತು ಹಣಕಾಸು ನೆರವನ್ನು ಒದಗಿಸಲು ಘೋಷಣೆ ಮಾಡಿದೆ. ಎಂ ಎಸ್ ಎಮ್ ಇ ಅಥವಾ ವಿಮಾನಯಾನ ಅಥವಾ ಸಂಬಂಧಿತ ಇತರ ವಲಯದ ಆರ್ಥಿಕ ಅಸ್ತಿರತೆ ಎರಡು ಲಕ್ಷ ಕೋಟಿ ರೂಪಾಯಿಗಳಾಗಿದ್ದಲ್ಲಿ ಅದರ ಬದಲಿಗೆ 5,000 ಕೋಟಿ ರೂಪಾಯಿ ಹೆಚ್ಚುವರಿ ಸಾಲ.
ಸರಕಾರಿ ಬೆಂಬಲಿತ ಕ್ರೆಡಿಟ್ ಗ್ಯಾರಂಟಿ ಕಾರ್ಯಕ್ರಮ ನಿರ್ವಹಣೆಗಾಗಿ ಹೆಚ್ಚುವರಿ ಕಾರ್ಯನಿರತ ಬಂಡವಾಳ ಸಾಲವನ್ನು ಒದಗಿಸುವುದು. ಆದರೆ ಕಾರ್ಯನಿರತ ಬಂಡವಾಳ ಮಿತಿಯನ್ನು ಹೊಂದಿಕೊಂಡು ಅರ್ಹ ಸಾಲಗಾರರಿಗೆ ಯಾವುದೇ ಹೊಸ ಭದ್ರತೆ ಇಲ್ಲದೆ ಸೌಲಭ್ಯವನ್ನು ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಬಗ್ಗೆ ಯಾವುದೇ ಶುಲ್ಕವನ್ನು ವಿಧಿಸಲಾಗುತ್ತಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ದ ಕ ಜಿಲ್ಲಾ ಬಿಜೆಪಿ ಆರ್ಥಿಕ ಪ್ರಕೋಷ್ಠದ ಸಂಚಾಲಕ ಸಿ ಕೆ ಎಸ್ ಎಸ್ ನಾಯಕ್, ಸಹ ಸಂಚಾಲಕ ಯೋಗೇಶ್, ರಾಜೀವ್ ರಾವ್, ವಸಂತ ಶೆಟ್ಟಿ, ಎಸ್ಎಂ ಶಿವಪ್ರಕಾಶ್, ರಘುನಾಥ ಪೈ ಉಪಸ್ಥಿತರಿದ್ದರು.
ವರದಿ ರಾಯಿ ರಾಜ ಕುಮಾರ

