ದಾವಣಗೆರೆ : ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘ (ರಿ), ದಾವಣಗೆರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರುಗಳ ಆಶ್ರಯದಲ್ಲಿ ಮೇ.5ರಂದು ಮಧ್ಯಹ್ನ 12:30 ಗಂಟೆಗೆ ಜಾನಪದ ಮೇಳ ಪ್ರದರ್ಶನವು ರೋಟರಿ ಬಾಲ ಭವನ, ಪ್ರವಾಸಿ ಮಂದಿರ ರಸ್ತೆ, ದಾವಣಗೆರೆಯಲ್ಲಿ ನಡೆಯಲಿದೆ.
ಉದ್ಘಾಟನೆಯನ್ನು ಬಸವರಾಜ ಐರಣಿ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಪನಾ ರಾಜ್ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಬಸವರಾಜು ಡಿ. ಕೋಳೂರು, ರವಿಚಂದ್ರ, ದೇವೆಂದ್ರಪ್ಪ ಎಸ್. ಮಂಟೂರು, ಬಿ.ಇ. ತಿಪ್ಪೇಸ್ವಾಮಿ,ಸಿ.ಕೆ. ಭೋಜರಾಜ್, ಪಿ.ಜಿ. ಪರಮೇಶ್ವರಪ್ಪ, ಮಾರ್ತಂಡಪ್ಪ ಭಾಗವಹಿಸಲಿರುವರು.
