
ಸಮಾಜೋದ್ಧಾರಕ ಕುದ್ಮುಲ್ ರಂಗ ರಾವ್ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಕುದ್ಮುಲ್ ಅವರ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಲಾಯಿತು. ಹಿರಿಯ ವಿಮರ್ಶಕ ಡಾ. ಶಿವರಾಮ ಶೆಟ್ಟಿ ಅವರು ಸಮ ಸಮಾಜದ ಕನಸು ಕಂಡು ನಿರ್ಲಕ್ಷ್ಯತ ಸಮುದಾಯಗಳ ಅಭ್ಯುದಯಕ್ಕೆ ಶ್ರಮಿಸಿದ ಕುದ್ಮುಲ್ಅವರ ಚಿಂತನೆಗಳನ್ನು ತಿಳಿದು ಕೊಳ್ಳಬೇಕು ಎಂದರು. ನಿರೂಪಕ ಪ್ರಕಾಶ್ ಪುತ್ತೂರು, ಸಾಹಿತಿ ರಘು ಇಡ್ಕಿದು, ರಂಗ ನಿರ್ದೇಶಕ ಜಗನ್ ಪವಾರ್ ಬೇಕಲ್, ನಿವೃತ್ತ ಪ್ರಾಂಶುಪಾಲ ಕೃಷ್ಣ ಮೂರ್ತಿ ಉಪಸ್ಥಿತರಿದ್ದರು.

