ಉಡುಪಿ ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾದ ನೂತನ ಪದಾಧಿಕಾರಿಗಳನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ಅನುಮೋದನೆ ಮೇರೆಗೆ ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ ಡಿ.ಬಿ. ಅವರು ನಿಯುಕ್ತಿಗೊಳಿಸಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.
ಉಪಾಧ್ಯಕ್ಷರುಗಳಾಗಿ ಹೆರಿಯಣ್ಣ ಅಮ್ಮುಂಜೆ, ಮಾಧವ ಸಾಲಿಗ್ರಾಮ , ಅನಿತಾ ಸಾಲಿಯಾನ್, ಸುಂದರ ಕೆ., ಸುಂದರ್ ಬಾಬು, ಪ್ರಧಾನ ಕಾರ್ಯದರ್ಶಿಗಳಾಗಿ ಸದಾನಂದ ಕೈಪುಂಜಾಲು, ಸುಧಾಕರ ಅಮೀನ್, ಕಾರ್ಯದರ್ಶಿಗಳಾಗಿ ಸುಂದರ್ ಬಿ. ಈದು, ಸುರೇಶ್ ಮೂಡುಬಗೆ, ಸದಾನಂದ ಚಾಂತಾರು, ಬೇಬಿ ರಾಜೇಶ್, ರೇಖಾ ಶಂಕರ, ಕೋಶಾಧಿಕಾರಿಯಾಗಿ ಈಶ್ವರ ಶೀರೂರು, ಸಾಮಾಜಿಕ ಜಾಲತಾಣ ಪ್ರಮುಖರಾಗಿ ಅರುಣ್ ಕುಮಾರ್, ಕಾರ್ಯಕಾರಿಣಿ ಸದಸ್ಯರುಗಳಾಗಿ ಹರಿಶ್ಚಂದ್ರ, ಸುಂದರ ಎ., ಕಿರಣ್ ಕುಮಾರ್, ಪ್ರದೀಪ್ ಮಾರ್ಗೊಳ್ಳಿ, ಶಿವಾನಂದ, ವೀಣಾ, ಸುರೇಶ್, ಅಣ್ಣಪ್ಪ, ಯಶೋದ, ಕೃಷ್ಣ, ಗೀತಾ, ಉದಯ ಕುಮಾರ್ ಬತ್ತಡ, ಮಂಜುಳಾ, ರವೀಂದ್ರ ಎಸ್. ಸೌಕೂರು, ಹರ್ಷ, ನಾಗರತ್ನ ಇವರುಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಕೃಷ್ಣಮೂರ್ತಿ ಡಿ.ಬಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

