ಮಂಗಳಾದೇವಿಯ ಶ್ರೀ ರಾಮಕೃಷ್ಣ ಮಠದಲಿ ಎರಡು ವಾರಗಳ [ಜುಲೈ ತಿಂಗಳ-2026] ಕಾಲ ಜರುಗುವಸಂಜೆಯಯೋಗ[5 ಗಂಟೆಯ]ಶಿಬಿರವನ್ನು ರಾಮಕೃಷ್ಣ ಮಠ, ಮಂಗಳೂರು ಇಲ್ಲಿಯ ಬಾಲಕಾಶ್ರಮದ ವಾರ್ಡನ್ಆಗಿರುವಸ್ವಾಮಿಯುಗೇಶನಂದಾಜೀಉದ್ಘಾಟಿಸಿ, ತಮ್ಮ ಆಶೀರ್ವಚನದಲ್ಲಿ ನಮ್ಮ ಭಾರತೀಯಕಲೆಯಾದ “ಯೋಗ”ವನ್ನುತನ್ನದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ಬಹಳಷ್ಟು ಸಹಕಾರಿಯಾಗಬಹುದು. ಏಕಕಾಲಕ್ಕೆ ಹಲವು ಕೆಲಸ ಕಾರ್ಯಗಳ ಒತ್ತಡವಿದ್ದರೂ ಮನಸನ್ನು ನಿಯಂತ್ರಣಗೊಳಿಸುವ ವಿಧಾನಗೊತ್ತಿದ್ದರೆ ಸಮರ್ಪಕವಾಗಿತನ್ನ ಕೆಲಸ ಕಾರ್ಯಗಳನ್ನು ಹಾಯಾಗಿಆರಾಮವಾಗಿ ನಿರ್ವಹಿಸಬಹುದು.ಇಲ್ಲಿವೈಜ್ಞಾನಿಕವಾಗಿದೃಢಪಟ್ಟಂತಹಯೋಗವನ್ನು ವ್ಯಕ್ತಿಯುತನ್ನಜೀವನದಲ್ಲಿ ಸಮರ್ಪಕವಾಗಿ ಅಳವಡಿಸಿಕೊಂಡರೆ ನೆಮ್ಮದಿಯ ಬಾಳುವೆಗೆ ಸೋಪಾನವಾಗುವುದು. ಧ್ಯಾನ ಮತ್ತು ಪ್ರಾಣಾಯಾಮದಿಂದಕೂಡಿದ “ಯೋಗ” ವನ್ನು ಮಾಡುವುದರಿಂದ ಶರೀರದ ಪ್ರತಿಯೊಂದು ಅಂಗಾAಗಗಳಿಗೆ ನವಚೈತನ್ಯಒದಗಿದೈಹಿಕ, ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕವಾಗಿ ವಿಕಸನಗೊಳ್ಳಲು ಸಹಕಾರಿಯಾಗುತ್ತದೆ. ಹಾಗೂ ತಾಳ್ಮೆ, ಶಾಂತಿಒದಗಿ ಸಹಜವಾಗಿ ನರಮಂಡಲ ಚೈತನ್ಯ ಶೀಲವಾಗುತ್ತದೆ. ಎಂದು ತಿಳಿಸಿದರು.
ದೇಲಂಪಾಡಿಯೋಗ ಪ್ರತಿಷ್ಠಾನದÀಯೋಗಗುರುಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಶಿಬಿರಾರ್ಥಿಗಳಿಗೆ ಯೋಗದ ಮಹತ್ವÀ ಪ್ರಯೋಜನಗಳನ್ನು ತಿಳಿಸಿದರು ಪತಂಜಲಿ ಋಷಿಗಳು ತಮ್ಮಯೋಗಶಾಸ್ರö್ತದಲ್ಲಿ ನಾಲ್ಕು ಅಧ್ಯಾಯಗಳ ಮೊದಲ ಅಧ್ಯಾಯದ ಸಮಾಧಿ ಪಾದದಲ್ಲಿ ಈ ಸೂತ್ರವನ್ನು ಹೇಳಿದ್ದಾರೆ.ಯೋಗದ ಅಧ್ಯಾಯನ ಮತ್ತುಅಭ್ಯಾಸದ ಪರಿಚಯವಾಗಿದೆ. ಅಥಃಎಂದರೆ ವಿವರಣೆಯನ್ನು ಪರಿಚÀಯಿಸಲು ಹೆಚ್ಚಾಗಿ ಬಳಸಲಾಗುತ್ತದೆ. ಯೋಗಎಂದರೆಏಕತೆ,ಸಾಮರಸ್ಯ, ಅನುಶಾಸನಂ ಎಂದರೆಅನುಭವದ ಪರಿಚಯ ಸೂಚನೆ ಶಿಸ್ತು ಆಗಿದೆ. ಮಂತ್ರವಾಗಿ ಬಳಸಬಹುದು ಮೊದಲ ಹಂತಗಳು ಯಾವಾಗಲೂಕಠಿನವಾಗಿದೆ. ಯೋಗಅಧಿವೇಶನವನ್ನು ಪ್ರಾರಂಭಿಸುವಅನುಭವಿ ಯೋಗಿಯಾಗಿದ್ದರೂಯೋಗದಅಭ್ಯಾ¸ಕ್ಕೂಇದುಅನ್ವಯಿಸುತ್ತದೆ. ಏಕಾಗ್ರತೆ ಮತ್ತುಅಲೋಚನೆಯಕಾರ್ಯದ ಮೂಲಕ ತಿಳಿದುಕೊಳ್ಳುವುದು. ಯೋಗಕ್ಕೆ ಸಂಬAದಿಸಿದAತೆ ಸೂಚನೆಗಳು ಅಥವಾ ಪೂರ್ವಶಿಸ್ತು, ಅಶುದ್ದಮನಸ್ಸು ಮತ್ತುಅಲೆದಾಡುವ ಪ್ರವೃತ್ತಿಇರುವವರು ಈ ಶಾಸ್ತçದಲ್ಲಿಅಭ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಅಭ್ಯಾಸವಿಲ್ಲದೆಏನನ್ನೂ ಸಾಧಿಸಲಾಗುವುದಿಲ್ಲ.ಇಲ್ಲಿ ಶಿಸ್ತಿನ ಗುಣಮಟ್ಟ ಹೆಚ್ಚು ಮುಖ್ಯಎಂದು ತಿಳಿಸಿದರು.
ಶ್ರೀ ದೇಲಂಪಾಡಿ ಶಿಷ್ಯರಾದ, ಭಾರತಿ,ಕಾರ್ತಿಕ್, ತುಕರಾಮ, ಚಂದ್ರಹಾಸ ಬಾಳ ಹಾಗೂ ಪ್ರೇಮಪಧ್ಮಾವತಿಹಾಗೂ ವಿ.ಪ್ರೇಮಇವರು ಸಹಕರಿಸಿದರು. ಆಸಕ್ತರು ನೋಂದಾಯಿಸಿಕೊಳ್ಳಲು ಆಶ್ರಮದಕಾರ್ಯಾಲವನ್ನು ಸಂಪರ್ಕಿಸಬಹುದು. ಸಂಪರ್ಕ: 0824-2414412

