ಕೃಷಿ ಪತ್ತಿನ ಸಹಕಾರ ಸಂಘಗಳು ಪರಿಸರದ ಕೃಷಿಕರ ಸೇವೆಗೆ ಸದಾ ಬದ್ಧರಾಗಿರಬೇಕು : ಕುತ್ಯಾರು ಪ್ರಸಾದ್ ಶೆಟ್ಟಿ
ಕೃಷಿ ಇಲಾಖೆಯ ಸಹಯೋಗದಲ್ಲಿ ಕಾರ್ಯ ವ್ಯಾಪ್ತಿಯ ರೈತರ ಪಹಣಿಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡುವ ಎರಡು ದಿನಗಳ ಅಭಿಯಾನವನ್ನು ಸಂಘದ ಪ್ರಧಾನ ಕಚೇರಿಯ ಆವರಣದಲ್ಲಿ ದೀಪ ಬೆಳಗುವ ಮೂಲಕ ಚಾಲನೆಯನ್ನು ನೀಡಿ ಸಂಘದ ಅಧ್ಯಕ್ಷರಾದ ಕುತ್ಯಾರು ಪ್ರಸಾದ್ ಶೆಟ್ಟಿಯವರು ಮಾತನಾಡಿದರು.
ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ವೀರೇಂದ್ರ ಪಾಟ್ಕರ್, SCDCC ಬ್ಯಾಂಕ್ ಪ್ರತಿನಿಧಿ ರಾಜ ಗೋಪಾಲ ಬಲ್ಲಾಳ್, ನಿರ್ದೇಶಕರಾದ ರಂಜಿತ್ ಪ್ರಭು, ವಾರಿಜಾ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಆಚಾರ್ಯ, ತಾ|| ಕೃಷಿ ಅಧಿಕಾರಿ ಪುಷ್ಪಲತಾ, ತಾಂತ್ರಿಕ ವ್ಯವಸ್ಥಾಪಕಿ ದಿವ್ಯಾ, ಕೃಷಿ ಸಖಿಯರಾದ ಪ್ರಜ್ಞಾ ಹಾಗೂ ಭಾರತಿ ಆಚಾರ್ಯ, ಪ್ರಗತಿಪರ ಕೃಷಿಕರಾದ ನಿತ್ಯಾನಂದ ನಾಯಕ್ ಪಾಲಮೆ ಹಾಗೂ ಕಾರ್ಯವ್ಯಾಪ್ತಿಯ ಕೃಷಿಕರು ಹಾಜರಿದ್ದರು.

