ಸಿನಿಮಾಸಿರಿಯ ನೂತನ ಅಧ್ಯಕ್ಷರಾಗಿ ಸುರಭಿ ಶಿವಮೂರ್ತಿ ಆಯ್ಕೆ

0
29

ದಾವಣಗೆರೆ : ದಾವಣಗೆರೆಯ ಚಲನಚಿತ್ರ ಅಭಿಮಾನಿಗಳ ಕ್ರಿಯಾತ್ಮಕ ಸಂಸ್ಥೆ “ಸಿನಿಮಾ ಸಿರಿ”ಯ ಇತ್ತೀಚಿಗೆ ದಾವಣಗೆರೆಯ ಶಿವಯೋಗಿ ಮಂದಿರದ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ಸಂಸ್ಥೆಯ ಸರ್ವ ಸದಸ್ಯರ ಮಹಾಸಭೆಯಲ್ಲಿ ಸಿನಿಮಾ ಸಿರಿಯ ನೂತನ ಅಧ್ಯಕ್ಷರಾಗಿ ಸುರಭಿ ಶಿವಮೂರ್ತಿಯವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ಸಿನಿಮಾಸಿರಿಯ ಅಧ್ಯಕ್ಷರಾದ ಅಂದನೂರು ಮುಪ್ಪಣ್ಣನವರ ಅಧ್ಯಕ್ಷತೆಯಲ್ಲಿ ನಡೆದ ಈ ಮಹಾಸಭೆಯಲ್ಲಿ ಇತ್ತೀಚಿಗೆ ಸ್ವರ್ಗಸ್ಥರಾದ ಖ್ಯಾತ ಗಾನ ಕೋಗಿಲೆ ಎಸ್.ಜಾನಕಿಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಿನಿಮಾಸಿರಿಯ ಪ್ರಧಾನ ಕಾರ್ಯದರ್ಶಿಯಾಗಿ ಈಶ್ವರಿ ಶಿವಕುಮಾರ್, ಖಜಾಂಚಿಯಾಗಿ ಮಲ್ಲಿಕಾರ್ಜುನ ಗಾಂಧಿ, ಪರಿಕಲ್ಪನಾ ನಿರ್ದೇಶಕರಾಗಿ ಹೆಚ್.ವಿ.ಮಂಜುನಾಥಸ್ವಾಮಿ, ಗೌರವ ಅಧ್ಯಕ್ಷರಾದ ಅಂದನೂರು ಮುಪ್ಪಣ್ಣ, ಟಿ.ಎಂ.ಪಂಚಣ್ಣ, ಸಮಿತಿ ಸದಸ್ಯರಾಗಿ ಉಮೇಶ್ ಗುಜ್ಜಾರ್, ಕಣಕುಪ್ಪಿ ಮುರುಗೇಶಪ್ಪ, ಆರ್.ಟಿ.ಮೃತುಂಜಯ, ನರಸಿಂಹ ಬಂಡಿವಾಡ, ಕೆ.ಹೆಚ್.ಮಂಜುನಾಥ್, ಭಾವನ್ನಾರಾಯಣ, ಜೆ.ಆರ್.ನಿಂಗೋಜಿರಾವ್ ಗುಜ್ಜಾರ್, ಸವಣೂರು ಬಾಬು, ಗೀತಾ ಬದರಿನಾಥ್ ನೇಮಕ ಮಾಡಲಾಗಿದೆ ಎಂದು ಶೆಣೈಯವರು ಪ್ರಕಟಿಸಿದ್ದಾರೆ.

ಖ್ಯಾತ ಗಾಯಕ ಆರ್.ಟಿ.ಮೃತುಂಜಯರವರು ಪ್ರಾರಂಭದಲ್ಲಿ ಸ್ವಾಗತ ಮಾಡಿ ಕೊನೆಯಲ್ಲಿ ವಂದಿಸಿದರು.

LEAVE A REPLY

Please enter your comment!
Please enter your name here