ಮುನಿಯಾಲು : ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ : ಗುರುಗಳ ಜನ್ಮದಿನೋತ್ಸವ : ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ

0
71

ಮುನಿಯಾಲು : ಮುನಿಯಾಲು ಮಾತಿಬೆಟ್ಟು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ನಾರಾಯಣಗುರು ನಗರದಲ್ಲಿರುವ ಸಮುದಾಯ ಭವನದಲ್ಲಿ ಶ್ರೀ ಗುರುನಾರಾಯಣ ಸ್ವಾಮೀಜಿಯವರ ೧೭೧ನೇ ಜನ್ಮದಿನೋತ್ಸವ, ಗುರುಪೂಜೆ, ಭಜನೆ, ಧಾರ್ಮಿಕ ಸಭೆ ಮತ್ತು ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಭಾನುವಾರ ನಡೆಯಿತು. ಜಾನಪದ ಚಿಂತಕ ಅಗತ್ತಾಡಿ ದೋಲ ಬಾರಿಕೆಯ ಶೈಲು ಬಿರ್ವ ಧಾರ್ಮಿಕ ಉಪನ್ಯಾಸದಲ್ಲಿ ಶ್ರೀ ನಾರಾಯಣ ಗುರುಗಳ ಸಂದೇಶ, ತುಳುನಾಡಿನ ತತ್ವಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ಮಾತನಾಡಿದರು. ವಿವಿಧ ಕ್ಷೇತ್ರಗಳ ಸಾಧಕರಾದ ಪ್ರಗತಿಪರ ಕೃಷಿಕ ಗೋಪಾಲ ಕುಲಾಲ್‌ ಪಿತ್ತುಲ್‌ ಗುಂಡಿ, ನಾಟಿ ವೈಧ್ಯ ಬೊಗ್ರ ಮೇರ, ಸ್ಯಾಕ್ಸೋಪೋನ್‌ ವಾದಕ ಸದಾಶಿವ ಸೇರಿಗಾರ್‌, ಆಯುರ್ವೇದ ವೈದ್ಯ ಡಾ. ರೋಶನ್‌ ಆರ್‌ ಕುಕ್ಕುಜೆ, ಶಿಕ್ಷಕಿಯರಾದ ರಂಜಿತಾ ಪೂಜಾರಿ ಪಡುಕುಡೂರು, ನಂದಿನಿ ಪ್ರಕಾಶ ಪೂಜಾರಿ ಮಾತಿಬೆಟ್ಟು, ವಕೀಲ ಸುಮೀತ್‌ ಪೂಜಾರಿ ಮುನಿಯಾಲು, ರಾಷ್ಟ್ರೀಯ ಮಟ್ಟದ ಬಾಲ ಕರಾಟೆ ಪ್ರತಿಭೆ ಶರಣ್ಯ ಸತೀಶ ಪೂಜಾರಿ ಎಳ್ಳಾರೆ, ಸನ್ವಿತ್‌ ಎಸ್‌ ಪೂಜಾರಿ ಚಟ್ಕಲ್‌ ಪಾದೆ, ಜಿಲ್ಲಾಮಟ್ಟದ ಚೆಸ್‌ ಕ್ರೀಡಾಪಟು ಚಿನ್ಮಯ್‌ ಪೂಜಾರಿ ಮಾತಿಬೆಟ್ಟು, ಬಿಪಿಎಡ್‌ ಶೈಕ್ಷಣಿಕ ಸಾಧಕಿ ವರ್ಷಿಣಿ, ಜಿಮ್ನಾಸ್ಟಿಕ್‌ ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್‌ ಸಾಧಕಿ ಆಪ್ತಿ ಆಚಾರ್ಯ,ಜಿಲ್ಲಾ ಪ್ರಶಸ್ತಿ ಪುರಸ್ಕೃತ ಪಡುಕುಡೂರು ಶಾಲೆಯ ಮುಖ್ಯ ಶಿಕ್ಷಕ ಹರೀಶ ಪೂಜಾರಿ ಎಸ್‌ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ವೇತನ ವಿತರಣೆ ಮತ್ತು ಪ್ರತೀಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ನಡೆಯಿತು. ಮುನಿಯಾಲು ಮಾತಿಬೆಟ್ಟು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಟಿ. ಮಂಜುನಾಥ್‌ ಅಧ್ಯಕ್ಷತೆ ವಹಿಸಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸರ್ವರ ಸಹಕಾರ ಕೋರಿದರು.
ವರಂಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಆಮೀನ್‌ ಅಂಡಾರು, ಹಿರಿಯರಾದ ವಿಠ್ಠಲ ಪೂಜಾರಿ ವರಂಗ, ಪೆರ್ವಾಜೆ ಶ್ರೀ ಮಹಾಲೀಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರ ಕೆ.ಪ್ರಭಾಕರ ಬಂಗೇರ, ಅಜೆಕಾರು ನಾರಾಯಣಗುರು ಸ್ವಾಮಿ ಸೇವಾ ಸಂಘದ ಅಧ್ಯಕ್ಷ ರತ್ನಾಕರ ಆಮೀನ್‌, ಕಾರ್ಕಳ ಯುವವಾಹಿನಿ ಘಟಕದ ಅಧ್ಯಕ್ಷೆ ಮಮತಾ ಅಂಚನ್‌, ಅಣ್ಣಯ್ಯ ಜಿ ಪೂಜಾರಿ ಮಾತಿಬೆಟ್ಟು, ದೇಜು ಡಿ ಪೂಜಾರಿ ಸಿರಿಬೈಲು, ಸಂತೋಷ್‌ ಜಾರಣಿಗೆ, ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್‌ ಕುಮಾರ್‌, ಮುನಿಯಾಲು ಗುರುನಾರಾಯಣ ಸ್ವಾಮಿ ಸೇವಾ ಸಂಘದ ಗೌರವಾಧ್ಯಕ್ಷ ಎಸ್.ಟಿ.ಕುಂದರ್‌, ಸ್ಥಾಪಕ ಅಧ್ಯಕ್ಷ ಎಂ.ಆನಂದ ಪೂಜಾರಿ, ಉಪಾಧ್ಯಕ್ಷರಾದ ಕೆ. ಮಂಜುನಾಥ್‌, ಹರೀಶ ಪೂಜಾರಿ, ಪ್ರಧಾನ ಕಾರ್ಯದರ್ಸಿ ರತ್ನಾಕರ ಪೂಜಾರಿ, ಕೋಶಾಧಿಕಾರಿ ರಾಜು ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಹರೀಶ್‌, ಕಾರ್ಯದರ್ಶಿ ರೇಖಾ ಸತೀಶ್‌, ಯುವ ಘಟಕದ ಅಧ್ಯಕ್ಷ ಸತೀಶ ಪೂಜಾರಿ, ಕಾರ್ಯದರ್ಸಿ ನವೀನ್‌ ಪೂಜಾರಿ, ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆನಂದ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಪ್ರಕಾಶ ಪೂಜಾರಿ ಮಾತಿಬೆಟ್ಟು ನಿರೂಪಿಸಿ ರತ್ನಾಕರ ಪೂಜಾರಿ ಸ್ವಾಗತಿಸಿ ಹರೀಶ ಪೂಜಾರಿ ವಂದಿಸಿದರು.

LEAVE A REPLY

Please enter your comment!
Please enter your name here