ಕಾರ್ಕಳ ಬಸ್ ಸ್ಟಾಂಡ್ ಪ್ರಯಾಣಿಕರ ತಂಗುದಾಣದಲ್ಲಿ ಕುಡಿಯುವ ನೀರಿನ ಮರುಜೋಡಣೆಗೆ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾವ್ ಸ್ಪಂದಿಸಿ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ.
ಕಾರ್ಕಳ ಬಸ್ ಸ್ಟಾಂಡ್ ಪ್ರಯಾಣಿಕರ ತಂಗುದಾಣದಲ್ಲಿ ಕುಡಿಯಲು ನೀರಿನ ವ್ಯವಸ್ಥೆಗೆ ಕ್ಷೇತ್ರದ ಶಾಸಕರ ಅನುದಾನ, ಉದ್ಯಮಿಗಳಾದ ವಿಜಯ್ ಶೆಟ್ಟಿ, ರೋಟರಿ ಕ್ಲಬ್ ಕಾರ್ಕಳ ಅವರು ನೀಡಿದ ಕೋಲ್ಡ್, ಬಿಸಿ ನೀರಿನ ಎರಡು ಫ್ರಿಡ್ಜ್ ನೀಡಲಾಗಿತ್ತು.
ಸುಮಾರು ಎಂಟು ತಿಂಗಳುಗಳಿಂದ ಕಾರ್ಕಳ ಪುರಸಭೆಯಿಂದ ಈ ನೀರಿನ ವ್ಯವಸ್ಥೆಗೆ ನೀರು ಸರಬರಾಜು ಆಗದೇ ಸಮಸ್ಯೆ ಆಗಿತ್ತು.
ಬಸ್ಸು ಏಜೇಂಟರ ಬಳಗವು, ಸ್ಥಳೀಯ ಜನಪ್ರತಿನಿದಿ, ಇಂಜಿನಿಯರ್ ಬಳಿ ಸುಮಾರು ನೂರಕ್ಕೂ ಹೆಚ್ಚು ಬಾರಿ ಮನವಿ ಮಾಡಿದರೂ ಪುರಸಭೆ ಸ್ಪಂದನೆ ನೀಡಲಿಲ್ಲ
ಸಾರ್ವಜನಿಕರು, ಪ್ರಯಾಣಿಕರು ದಣಿವಾರಿಸಲು ಬಂದು ಫ್ರಿಡ್ಜ್ ಒತ್ತಿದಾಗ ನೀರು ಬಾರದೆ ಇದ್ದಾಗ ನೋಡುವವರ ಮನಸ್ಸು ಕರಗುವಂತಾಗುತಿತ್ತು. ಈ ಸಮಸ್ಯೆ ಪರಿಹಾರ ಮಾಡುವಂತೆ ಶಾಸಕ ಸುನಿಲ್ ಕುಮಾರ್ ಅವರು ಕೂಡಾ ಪುರಸಭೆಗೆ ಸೂಚಿಸಿದ್ದರು.
ಆದರೆ ಕಾರ್ಕಳ ಪುರಸಭೆ ಮಾತ್ರ ಈ ನೀರಿನ ವ್ಯವಸ್ಥೆ ಯನ್ನು ಸರಿ ಪಡಿಸದೆ ತಾನು ಯಾವುದಕ್ಕೂ ಸ್ಪಂದನೆ ನೀಡೋಲ್ಲ ಎಂಬಂತೆ ಬೇಜವಾಬ್ದಾರಿಯಿಂದ ವರ್ತನೆ ಮಾಡಿತ್ತು
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ, ಪುರಸಭೆಯ ಮಾಜಿ ಸದಸ್ಯರಾದ ಪ್ರಕಾಶ್ ರಾವ್ ರವರಲ್ಲಿ ವಿಷಯವನ್ನು ಪ್ರಸ್ತಾವಿಸಿದಾಗ ತಕ್ಷಣ ಕಾರ್ಯ ಪ್ರವೃತ್ತರಾದ ಅವರ ಮೂರು ದಿನಗಳ ಸತತ ಪ್ರಯತ್ನದ ಫಲವಾಗಿ ಎರಡು ಫ್ರಿಡ್ಜ್ ಗಳಲ್ಲಿ ದೀಪಾವಳಿಯ ವಿಶೇಷ ಕೊಡುಗೆ ಎಂಬಂತೆ ನೀರುಬರಲು ಪ್ರಾರಂಭವಾಯಿತು.
ಸಾರ್ವಜನಿಕರಿಗೆ ಕುಡಿಯಲು ನೀರು ಬರುವಂತೆ ಪ್ರಯತ್ನಿಸಿದ ಪ್ರಕಾಶ್ ರಾವ್ ಮತ್ತು ಅನಂತಕೃಷ್ಣ ಶೆಟ್ಟಿ ಅವರಿಗೆ ಕಾರ್ಕಳ ಬಸ್ ಸ್ಟಾಂಡ್ ಏಜೆಂಟ್ ಬಳಗ ಹಾಗೂ ಸ್ಥಳೀಯರು ಕೃತಜ್ಞತೆ ಸಲ್ಲಿಸಿದ್ದಾರೆ.