ಉಡುಪಿ : ಯುವ ಬಂಟರ ಸಂಘ (ರಿ.) ಕಂಬಳಕಟ್ಟೆ – ಕೊಡವೂರು, ಉಡುಪಿ ಜಿಲ್ಲೆ ವತಿಯಿಂದ “ಆಟಿ…ಒಂಜಿ ನೆಂಪು” ಎಂಬ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮವು ಆಗಸ್ಟ್ 16, 2026 ಭಾನುವಾರ ನಡೆಯಲಿದೆ.
ಈ ಕಾರ್ಯಕ್ರಮವು ಕಂಬಳಕಟ್ಟೆ, ಕೊಡವೂರು*ದಲ್ಲಿ ಬೆಳಿಗ್ಗೆ *10.00 ಗಂಟೆಗೆ ಆರಂಭಗೊಳ್ಳಲಿದೆ. ಆಟೋಟ ಸ್ಪರ್ಧೆಗಳು ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಆರಂಭವಾಗಲಿದೆ.
ಉದ್ಘಾಟನಾ ಸಮಾರಂಭ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಬಂಟರ ಸಂಘ (ರಿ.) ಕಂಬಳಕಟ್ಟೆ-ಕೊಡವೂರಿನ ಅಧ್ಯಕ್ಷರಾದ ಶ್ರೀ ಪುಷ್ಪರಾಜ್ ಶೆಟ್ಟಿ ಆದಿವುಡುಪಿ ವಹಿಸಲಿದ್ದಾರೆ.
ಉದ್ಘಾಟಕರು: ಬಿ. ಜಯಕರ ಶೆಟ್ಟಿ ಇಂದ್ರಾಳಿ, ಪ್ರಧಾನ ಕಾರ್ಯದರ್ಶಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಮಂಗಳೂರು
ಮುಖ್ಯ ಅತಿಥಿ: ಶಾಲಿನಿ ಡಿ. ಆಳ್ವ, ಸ್ಥಾಪಕ ಪ್ರಧಾನ ಕಾರ್ಯದರ್ಶಿ, ಕಾರ್ಕಳ ಮಹಿಳಾ ಬಂಟ್ಸ್ ಸಂಘ, ಕಾರ್ಕಳ
ಕಾರ್ಯಕ್ರಮದ ಉದ್ದೇಶ
ಆಟಿ ತಿಂಗಳ ಸಂಪ್ರದಾಯ, ಸಾಂಪ್ರದಾಯಿಕ ಆಟಗಳು, ಆಟಿ ತಿಂಡಿಗಳು ಮತ್ತು ಜನಪದ ಕ್ರೀಡೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಸಹೃದಯ ಬಂಟ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘದ ಪದಾಧಿಕಾರಿಗಳು ವಿನಂತಿಸಿದ್ದಾರೆ.
ಸಂಪರ್ಕ:
ಪುಷ್ಪರಾಜ್ ಶೆಟ್ಟಿ ಆದಿವುಡುಪಿ – ಅಧ್ಯಕ್ಷರು – 8105883177
ವಿಜೇಶ್ ಶೆಟ್ಟಿ ಜನ್ನಿಬೆಟ್ಟು – ಪ್ರಧಾನ ಕಾರ್ಯದರ್ಶಿ – 9986297679
ರಾಕೇಶ್ ಶೆಟ್ಟಿ ಕಂಬಳಕಟ್ಟೆ – ಖಜಾಂಚಿ – 9164719409

