ಮೂಡುಬಿದಿರೆ ತಾಲೂಕು ಬೆಳುವಾಯಿಯಲ್ಲಿ ಜನವರಿ 25 ರಂದು ನಡೆಯಲಿರುವ ಬ್ರಹತ್ ಹಿಂದೂ ಸಂಗಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಬನ್ನಡ್ಕ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಜರುಗಿತು.
ಪಡುಮಾರ್ನಾಡು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಶ್ರೀ ಎಂ ದಯಾನಂದ ಪೈಯವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು.ಚಿತ್ರದಲ್ಲಿ ಬೆಳುವಾಯಿ ಗ್ರಾಮ ಪಂಚಾಯತ್ ಸದಸ್ಯ ಭರತ್ ಶೆಟ್ಟಿ, ಬೆಳುವಾಯಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಜಯಂತಿ, ವಂದನಾ ಪ್ರಭು,ಸುಮತಿ,ಸಿವಿಲ್ ಗುತ್ತಿಗೆದಾರ ವಾಮನ್ ನಾಯಕ್,ಆನಂದ ಶಾಂತಿನಗರ,ಸದಾನಂದ ಶೆಟ್ಟಿ,ಕಿಶೋರ್ ಭಂಡಾರಿ,ಸುಕೇಶ್, ಅಣ್ಣಿ ಪೂಜಾರಿ,ಸಂಯೋಜಕರಾದ ಮಂಜುನಾಥ ಶೆಟ್ಟಿ ಬೆಳುವಾಯಿ,ರಾಜೇಶ್ ನಾಯ್ಕ,ಬೋಳ ವಿಶ್ವನಾಥ ಕಾಮತ್ ಹಾಜರಿದ್ದರು.

