ಅಜಯ್ ಪೂಜಾರಿ ನೀರುಮಾರ್ಗ ರವರು ಬೈಕ್ ರೈಡಿಂಗ್ ಮೂಲಕ ದೇಶದ ಬೇರೆ ಬೇರೆ ಸ್ಥಳಗಳಲ್ಲಿ ಸಾಹಸ ಮತ್ತು ಸಂಶೋಧನೆಗಾಗಿ ತೆರಳುತ್ತಿದ್ದು ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ ಬಳಿ ತುಳು ಧ್ವಜ ಹಾರಿಸಿದ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ತುಳು ಧ್ವಜ ಮೇಲಿನ ಪ್ರೀತಿ ಗೌರವ ತೋರ್ಪಡಿಸುತ್ತಿದ್ದಾರೆ. ಅಷ್ಟೆ ಅಲ್ಲದೆ ತನ್ನ ಕೈಯಲ್ಲಿ ತುಳು ಧ್ವಜದ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾರೆ.