ವಿವಿಧ ರಾಜ್ಯಗಳಿಂದ ಆಗಮಿಸಿದ ಸುಮಾರು 233 ಕ್ಕೂ ಹೆಚ್ಚು ಸ್ಪರ್ಧಾಳುಗಳ ನಡುವೆ ಬಿಂದು ವಧು ಆಯ್ಕೆಯ ಕಾರ್ಯಕ್ರಮ ಮಂಗಳೂರಿನ ಎ ಜೆ ಎಲೈಟ್ ಗ್ರಾಂಡ್ ನಲ್ಲಿ ಜುಲೈ 12ರಂದು ನಡೆಯಿತು. ಬಿಂದು ಜ್ಯುವೆಲ್ಲರಿಯ ಆಭರಣಗಳನ್ನು ಧರಿಸಿ ಸ್ಪರ್ಧಾಳುಗಳಿಗೆ ಅವಕಾಶವನ್ನು ನೀಡಲಾಗಿದೆ.
ಇಂದಿನ ಯುವ ಪೀಳಿಗೆಯ ಸುಂದರ ಕನಸುಗಳಿಗೆ ಈ ಅವಕಾಶ ಸುಸಂದರ್ಭ ಎಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ಬಿಂದು ಜುವೆಲ್ಲರಿಯ ಅಭಿಲಾಶ್ ಹಾಗೂ ಅರ್ಜುನ್ ನುಡಿದರು.

ವೇದಿಕೆಯಲ್ಲಿ ತೀರ್ಪುಗಾರರಾದ ಯಶಸ್ವಿನಿ ದೇವಾಡಿಗ, ಶಿನು ಸಿಂಧು, ದಿಶಾ, ನಟ ಭರತ್ ಶೆಟ್ಟಿ, ಸಂತೋಷ್ ಶೆಟ್ಟಿ ಹಾಜರಿದ್ದರು. ಶರ್ಮಿಳಾ ಅಮೀನ್ ಕಾರ್ಯಕ್ರಮ ನಿರ್ವಹಿಸಿದ್ದರು. ಜಯಶ್ರೀ ಭರತನಾಟ್ಯವನ್ನು ಪ್ರದರ್ಶಿಸಿದರು.

ವರದಿ ರಾಯಿ ರಾಜ ಕುಮಾರ್

