ಬಿಜೆಪಿ ಯುವ ಮೋರ್ಚಾ ಕುಂದಾಪುರ ವತಿಯಿಂದ ಬ್ರಹತ್ ರಕ್ತ ದಾನ ಶಿಬಿರ: 75 ಯೂನಿಟ್ ರಕ್ತ ಸಂಗ್ರಹಣೆ

0
187

ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ ಯವರ 75 ನೇ ಜನ್ಮದಿನಾಚರಣೆ ಪ್ರಯುಕ್ತ ದೇಶದದ್ಯಾoತ ನಡೆಯುತ್ತಿರುವ ಸೇವಾ ಪಾಕ್ಷಿಕ ಕಾರ್ಯಕ್ರಮದ ಅನ್ವಯ ಕುಂದಾಪುರ ಮಂಡಲ ಬಿಜೆಪಿ ಯುವ ಮೋರ್ಚಾ ವತಿಯಿಂದ ಕುಂದಾಪುರ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಬ್ರಹತ್ ರಕ್ತ ದಾನ ಶಿಬಿರವು ಜರಗಿತು. ಮಾನ್ಯ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿಯವರ ಉಪಸ್ಥಿತಿಯಲ್ಲಿ ಮಾನ್ಯ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿ ಯವರು ಕಾರ್ಯಕ್ರಮದ ಉದ್ಘಾಟನೆ ಯನ್ನು ಮಾಡಿದರು.ಕಾರ್ಯಕ್ರದ ಅಧ್ಯಕ್ಷ ತೆಯನ್ನು ಮಂಡಲ ಯುವ ಮೋರ್ಚಾ ಅಧ್ಯಕ್ಷರರಾದ ಶ್ರೀ ಕಿರಣ್ ಪೂಜಾರಿ ತೆಕ್ಕಟ್ಟೆಯವರು ವಹಿಸಿದ್ದರು

ಈ ಸಂದರ್ಭದಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಪ್ರಥ್ವಿ ರಾಜ್ ಶೆಟ್ಟಿ ಬಿಲ್ಲಾಡಿ, ಮಂಡಲ ಅಧ್ಯಕ್ಷರರಾದ ಸುರೇಶ್ ಶೆಟ್ಟಿ,ಮಾಜಿ ಮಂಡಲ ಅಧ್ಯಕ್ಷರಾದ ಶ್ರೀ ಶಂಕರ್ ಅಂಕದ ಕಟ್ಟೆ, ಮಂಗಳೂರು ಬಿಜೆಪಿ ಸಹ ಪ್ರಭಾರಿ ಶ್ರೀ ರಾಜೇಶ್ ಕಾವೇರಿ,ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀ ಸತೀಶ್ ಪೂಜಾರಿ, ಶ್ರೀ ಸುಧೀರ್ ಕೆ ಎಸ್., ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ಚೇತನ್ ಖಾರ್ವಿ, ರಕ್ತನಿಧಿ ಸಂಸ್ಥೆಯ ಸತ್ಯನಾರಾಯಣ ಪುರಾಣಿಕ್, ವೈ. ಸೀತಾರಾಮ ಶೆಟ್ಟಿ, ಎ. ಮುತ್ತಯ್ಯ ಶೆಟ್ಟಿ, ಹಾಗೂ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು

ಪಕ್ಷದ ಪದಾಧಿಕಾರಿಗಳು, ವಿವಿಧ ಮೋರ್ಚಾ ಗಳ ಪದಾಧಿಕಾರಿಗಳು, ಕಾರ್ಯಕರ್ತರು ಉತ್ಸಾಹದಿಂದ ಸ್ವಯಂ ಪ್ರೇರಿತರಾಗಿ ರಕ್ತ ದಾನ ಮಾಡಿದರು. ಮಹಿಳಾ ಮೋರ್ಚಾ ಪದಾಧಿಕಾರಿ ಶ್ರೀಮತಿ ರೋಹಿಣಿ ಪೈ ಯವರು ಇಂದು 23 ನೇ ಬಾರಿ ರಕ್ತ ದಾನ ಮಾಡಿದರು.ಜಿಲ್ಲೆಯ ಮತ್ತು ಮಂಡಲದ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೋದಿಜಿಯವರ 75 ನೇ ಜನುಮದಿನದ ನೆನಪಿಗಾಗಿ 75 ಯೂನಿಟ್ ರಕ್ತ ಸಂಗ್ರಹಣೆ ಆಗಿತ್ತು.

LEAVE A REPLY

Please enter your comment!
Please enter your name here