ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ಸಾಧನಾ ಬಳಗ ಹಾಗೂ ವರ್ಧನಿ ಸಂಸ್ಥೆ ಸಂಯೋಗ ದೊಂದಿಗೆ ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿದ 3 ದಿವಸಗಳ ಉಚಿತ ಸನಿವಾಸಿ ರಂಗತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭವು ದಿನಾಂಕ 20-04-2025 ಜರುಗಿತು.
ಅಧ್ಯಕ್ಷತೆ ವಹಿಸಿದ್ದ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ಅವರು ವಿದ್ಯಾರ್ಥಿಗಳಿಗೆ ನೀಡುವ ಕಲಾ- ಸಂಸ್ಕೃತಿ ತರಬೇತಿಯ ನಿರಂತರತೆ ಕಾಪಾಡುವ ಅಗತ್ಯವನ್ನು ಒತ್ತಿ ಹೇಳಿದರು. ಇದರಿಂದ ಬೆಳೆಯುವ ಮಕ್ಕಳಲ್ಲಿ ಕಲಾಭಿಮಾನ ಹೆಚ್ಚುವುದಲ್ಲದೇ ಮಾತೃ ಭಾಷಾಭಿಮಾನ ಮೂಡುವುದು ಎಂದರು.
ಈ ಸಂಧರ್ಭದಲ್ಲಿ ಕೆನರಾ ಸಂಸ್ಥೆಯ ಮ್ಯೂಸಿಯಂ ವ್ಯವಸ್ಥಾಪಕರಾದ ಪಯ್ಯನೂರು ರಮೇಶ ಪೈ ಅವರು ಇತಿಹಾಸ ಪ್ರಸಿದ್ಧ ಹೊರ್ತುಸ್ ಇಂಡಿಕಸ್ ಮಲಬಾರಿಕಸ್ ನ ರಂಗಭಟ್ಟ, ವಿನಾಯಕ ಪಂಡಿತ್, ಅಪ್ಪು ಭಟ್, ಈ ಮೂವರು ಕೊಂಕಣಿಗರು ಆಯುರ್ವೇದದ ಗಿಡಮೂಲಿಕೆಗಳನ್ನುದಾಖಲಿಸಿರುವ ಬಗ್ಗೆ ವಿವರಣೆ ನೀಡಿದರು. ಈ ಬಗ್ಗೆ 350 ವರ್ಷ ಹಳೆಯ ಕೊಂಕಣಿ ಭಾಷೆಯಲ್ಲಿ ಬರೆದಿರುವ ಪ್ರಮಾಣ ಪತ್ರದ ಫಲಕವನ್ನು ವಿಶ್ವ ಕೊಂಕಣಿ ವಸ್ತು ಸಂಗ್ರಹಾಲಕ್ಕೆ ನೀಡಿದರು.
ತರಬೇತಿ ಸಂಚಾಲಕ, ಸಾಧನಾ ಬಳಗ ಮುಖ್ಯಸ್ಠರಾದ ಪ್ರಕಾಶ ಶೆಣೈ, ಜಗನ್ ಪವಾರ, ಅರುಣ್ ಪ್ರಕಾಶ ನಾಯಕ್, ಭಾವನಾ ವಿ ಪ್ರಭು, ವೃಂದಾ ನಾಯಕ, ಎಮ್ ನಾಗೇಶ ಪ್ರಭು ಸುಚಿತ್ರಾ ಎಸ್ ಶೆಣೈ ಮೊದಲಾದ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ರಂಗಚಟುವಟಿಕೆಗಳು, ಸಂಗೀತದ ಜೊತೆ ನಾಟಕ ದೃಶ್ಯ ಕಟ್ಟುವಿಕೆ, ಪಾತ್ರ ಪೋಷಣಾ ಕ್ರಮ, ರಂಗ ಅಭ್ಯಾಸ, ಹಾಗೂ ಸಂಗೀತ, ನೃತ್ಯ ಕಲಿಕೆ, ದೃಶ್ಯ ಸಂಭಾಷಣೆ, ಹಾವ ಭಾವ ಅಭ್ಯಾಸ, ಪಾತ್ರ ಹೊಂದಾಣಿಕೆ ಅಭ್ಯಾಸ, ಸ್ವರಾಭ್ಯಾಸ, ಕೋಲಾಟ, ಭಜನೆ, ವ್ಯಾಯಾಮ, ಧ್ಯಾನ ಮೊದಲಾದ ಹಲವಾರು ವಿಷಯಗಳಲ್ಲಿ ತರಬೇತಿಯನ್ನು ನೀಡಿದರು. ತರಬೇತುದಾರರು ಹಾಗೂ ಶಿಬಿರಾರ್ಥಿಗಳು ತಮ್ಮ ತಮ್ಮ ಅನುಭವ ಹಂಚಿಕೊಂಡರು. ಹಾಗೂ ವಿವಿಧ ರಂಗ ಚಟುವಟಿಕೆಗಳ ಪ್ರದರ್ಶನ ನಡೆಯಿತು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹೆಸರಾಂತ ರಂಗ ನಾಟಕ ಕಲಾವಿದರಾದ ಎಚ್ ಸತೀಶ್ ನಾಯಕ ಭಾಗವಹಿಸಿ. ಮಕ್ಕಳಿಗೆ ಇಂತಹ ಸುಸಜ್ಜಿತವಾದ ಸನಿವಾಸಿ ನಾಟಕ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಂತಹ ವಿಶ್ವ ಕೊಂಕಣಿ ಕೇಂದ್ರವನ್ನು ಶ್ಲಾಘಿಸಿದರು. ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು. ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ಡಿ ರಮೇಶ್ ನಾಯಕ್, ಕಾರ್ಯದರ್ಶಿ ಡಾ. ಮೋಹನ್ ಪೈ,ಸಿಎಒ ಡಾ ಬಿ ದೇವದಾಸ ಪೈ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ಪುಸ್ತಕಗಳನ್ನು ನೀಡಲಾಯಿತು.