ಸ್ತನ್ಯಪಾನ ಜಾಗೃತಿ ಶಿಬಿರ

0
13

ರಾಷ್ಟ್ರೀಯ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಲಯನ್ಸ್ ಕ್ಲಬ್ ಆಫ್ ಮಂಗಳೂರು ಸೋಮೇಶ್ವರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ನಾಟೆಕಲ್ನ ಸಹಯೋಗದಲ್ಲಿ ಸ್ತನ್ಯಪಾನ ಜಾಗೃತಿ ಶಿಬಿರವನ್ನು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಪ್ರಾಥಮಿಕ ಆರೋಗ್ಯ ಕೇಂದ್ರ, ನಾಟೆಕಲ್‌ನ ವೈದ್ಯಾಧಿಕಾರಿ ಡಾ. ಮದನ್ ಕುಮಾರ್ ಉದ್ಘಾಟಿಸಿದರು.

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ರವಿಕಿರಣ ಎಸ್.ಆರ್., MBBS, MD (ಮಕ್ಕಳ ತಜ್ಞ), ಪ್ರಾಧ್ಯಾಪಕರು, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ, ಮಂಗಳೂರು, ಇವರು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸ್ತನ್ಯಪಾನದ ಮಹತ್ವ, ಮೊದಲ ಆರು ತಿಂಗಳು ಕೇವಲ ತಾಯಿಯ ಹಾಲಿನ ಅಗತ್ಯತೆ, ಸಾಮಾನ್ಯ ತಪ್ಪು ಕಲ್ಪನೆಗಳು ಹಾಗೂ ಸರಿಯಾದ ಸ್ತನ್ಯಪಾನದ ವಿಧಾನಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು.

ಲಯನ್ ಕೆ. ವಿಜಯನ್, ಚಾರ್ಟರ್ ಅಧ್ಯಕ್ಷರು, ಲಯನ್ಸ್ ಕ್ಲಬ್ ಆಫ್ ಮಂಗಳೂರು ಸೋಮೇಶ್ವರ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಲಯನ್ ಡಾ. ಅನುರೂಪಾ, ಲಯನ್ ಶಶಿಕುಮಾರ್ ನಾಯರ್ ಹಾಗೂ ಲಯನ್ ಫ್ಲಾವಿಯಾ ಡಿಸೋಜಾ ಮಾತನಾಡಿ ಸ್ತನ್ಯಪಾನದ ಮಹತ್ವವನ್ನು ಒತ್ತಿ ಹೇಳಿದರು.

ಕಾರ್ಯಕ್ರಮದ ಕೊನೆಯಲ್ಲಿ ಲಯನ್ ನಿರ್ಮಿತಾ ಭಂಡಾರಿ ವಂದನಾರ್ಪಣೆ ಸಲ್ಲಿಸಿದರು.