ನಕಲಿ ಆಧಾರ್​ ಕಾರ್ಡ್​ ನೀಡಿ ನ್ಯಾಯಾಲಯಕ್ಕೆ ವಂಚನೆ

0
31

ಉಡುಪಿ : ಪ್ರಕರಣವೊಂದರಲ್ಲಿ ಜಾಮೀನು ಪಡೆಯಲು ನಕಲಿ ಆಧಾರ್​ ಕಾರ್ಡ್​ ಸೃಷ್ಟಿಸಿ ನ್ಯಾಯಾಲಯಕ್ಕೆ ವಂಚನೆ ಎಸಗಿದ ಆರೋಪದ ಮೇಲೆ ಉಡುಪಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಚಾರಣಾಧೀನ ಕೈದಿ ನೌಮಾನ್​ ಎಂಬಾತನಿಗೆ ನ್ಯಾಯಾಲಯದಲ್ಲಿ ಜಾಮೀನು ಒದಗಿಸುವ ಸಂದರ್ಭದಲ್ಲಿ ಅಕ್ರಮ ಎಸಗಿರುವುದು ಕಂಡು ಬಂದಿದೆ.

ಆರೋಪಿ ಫಾರೂಕ್​ ಎಂಬಾತನು ತನ್ನ ಸ್ವಂತ ಲಾಭಕ್ಕಾಗಿ ಪ್ರಶಾಂತ್​ ಎಂಬುವವರ ಆಧಾರ್​ ಕಾರ್ಡ್​ ಪ್ರತಿ ಬಳಸಿ, ಅದರಲ್ಲಿ ಕೆ.ಟಿ. ಮುಹಮ್ಮದ್​ ಅವರ ಹೆಸರು ಹಾಗೂ ವಿಳಾಸವನ್ನು ಸೇರಿಸಿ ನಕಲಿಯಾಗಿ ಆಧಾರ್​ ಕಾರ್ಡ್​ ಸೃಷ್ಟಿಸಿದ್ದಾನೆ. ನಕಲಿ ದಾಖಲೆಯನ್ನು ಸತ್ಯವೆಂದು ಬಿಂಬಿಸಿ ನ್ಯಾಯಾಲಯಕ್ಕೆ ಮೋಸ ಮಾಡುವ ದುರುದ್ದೇಶದಿಂದ ಹಾಜರುಪಡಿಸಿದ್ದು, ಈ ಮೂಲಕ ನ್ಯಾಯಾಲಯಕ್ಕೆ ಹಾಗೂ ನೈಜ ದಾಖಲೆಗಳನ್ನು ಹೊಂದಿರುವ ಮುಹಮ್ಮದ್​ ಕೆ.ಟಿ. ಮತ್ತು ಪ್ರಶಾಂತ್​ ಅವರಿಗೆ ವಂಚನೆ ಎಸಗಿದ್ದಾನೆ.

ಈ ಬಗ್ಗೆ ಜಿಲ್ಲಾ ನ್ಯಾಯಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಬ್ಬಾಸ್​ ಎಸ್​. ನೀಡಿದ ದೂರಿನ ಆಧಾರದ ಮೇಲೆ ಉಡುಪಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.