ನಮ ಮಾತೆರ್ಲ ಒಂಜೇ ಕಲಾತಂಡ ಅರುವ ಇದರ ಸದಸ್ಯರ “ಸುರಕ್ಷೆ “ಗಾಗಿ ಪ್ರಾರಂಭಿಸಿದ, ಸದಸ್ಯರಾದ ಬಾಲಕೃಷ್ಣ ಮೂಲ್ಯ ಸುಲ್ಕೇರಿ, ಆಕ್ಸಿಡೆಂಟ್ ನಿಂದ, ಬೆನಕ ಹಾಸ್ಪಿಟಲ್ ಉಜಿರೆ ಹಾಗೂ ವರದರಾಜ್ ಪೂಜಾರಿ ಬಳೆಂಜ, ಅನಾರೋಗ್ಯದಿಂದ ಮಂಗಳೂರು ಹಾಸ್ಪಿಟಲ್ ನಲ್ಲಿ, ದಾಖಲಾಗಿರುವುದರಿಂದ, ಅವರಿಗೆ ತಂಡದಿಂದ ತಲಾ ಒಬ್ಬರಿಗೆ 20,000ರೂ.ನಂತೆ, ಆರ್ಥಿಕ ಸಹಕಾರವನ್ನು ತಂಡದ ವತಿಯಿಂದ, ಅಳದಂಗಡಿ ಸತ್ಯದೇವತೆ ಸನ್ನಿಧಾನದಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ನಮ ಮಾತೆರ್ಲ ಒಂಜೇ ಕಲಾತಂಡದ ಗೌರವ ಅಧ್ಯಕ್ಷರಾದ N.M ತುಳುಪುಳೆ, ಸತ್ಯದೇವತೆ ಮೋಕ್ತೆಸರಾದ ಶಿವಪ್ರಸಾದ್ ಅಜಿಲರು, ದರ್ಶನ್ ಶೆಟ್ಟಿ ಅರುವ, ರಾಮಚಂದ್ರಗೊಲ್ಲ ಪಿಲ್ಯ, ಜನಾರ್ಧನ ಕೊಡಂಗೆ, ಶ್ರೀಧರ M. ಕರಂಬಾರು, ಗಿರೀಶ್ ಕುಲಾಲ್ ನಾವರ,
ರಾಕೇಶ್ ಪೂಜಾರಿ ಪಿಲ್ಯ, ಸುರೇಂದ್ರ ಸುಲ್ಕೇರಿ, ಹಿತೇಶ್ ಬೇಕಲ್, ರಮೇಶ್ ಸುವರ್ಣ ಅರುವ ಉಪಸ್ಥಿತರಿದ್ದರು.

